ಮಂಗಳವಾರ, ಅಕ್ಟೋಬರ್ 19, 2021

ಗೋವೆಕಾಯಿ ಕಡಬು

ಗೋವೆಕಾಯಿ (ಸಿಹಿಗುಂಬಳ) ಕಡಬು

ಸಾಂಪ್ರದಾಯಿಕ ತಿನಿಸು

ಹವ್ಯಕರ ಬಹಳ ಪ್ರಸಿದ್ಧ ತಿನಿಸು. ಈ ಕಡಬು ತಯಾರಿಸಲು ನಮ್ಮ ಮಲೆನಾಡಿನಲ್ಲಿ ವಿಶೇಷವಾದ ಬಾಳೆ ಸಿಗುತ್ತದೆ. ಇದಕ್ಕೆ ಗಂಟಲೆ ಕೀಳೆ ಎನ್ನುತ್ತಾರೆ. ಅರಿಶಿಣದ ಎಲೆಯನ್ನು ಬಳಸುತ್ತಾರೆ. ಇಲ್ಲವಾದಲ್ಲಿ ಬಾಳೆ ಎಲೆಯಲ್ಲೂ ಮಾಡಬಹುದು. ಅರಿಶಿಣದ ಎಲೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ನಾನು ನನ್ನ ಪೋಟ್ ನಲ್ಲಿ ಬೆಳೆದ ಅರಿಶಿಣದ ಎಲೆ ಬಳಸಿ ಕಡಬು ಮಾಡಿದ್ದೇನೆ.

ಬೇಕಾಗುವ ಸಾಮಗ್ರಿ :
ಗೋವೆಕಾಯಿ - 1/4 ಭಾಗ
(ಮಧ್ಯಮ ಗಾತ್ರದ ಗೋವೆಕಾಯಿಯ ಕಾಲುಭಾಗ)
ಅಕ್ಕಿ - 1 ಕಪ್
ಬೆಲ್ಲ - 1/2 ಕಪ್
ಉಪ್ಪು - 1/4 ಚಮಚ
ಅರಿಶಿಣದ ಎಲೆ - 6/8
ಇಲ್ಲವಾದಲ್ಲಿ ಬಾಳೆ ಎಲೆಯನ್ನು ಬಳಸಬಹುದು

ಮಾಡುವ ವಿಧಾನ :
ಗೋವೆಕಾಯಿಯನ್ನು ಕತ್ತರಿಸಿ ಸಿಪ್ಪೆ ತೆಗೆದು ತುರಿದು ಬೆಲ್ಲ ಹಾಕಿ ಬೇಯಿಸಬೇಕು.
ಅಕ್ಕಿಯನ್ನು ಎಂಟರಿಂದ ಹತ್ತು ಗಂಟೆಗಳ ಕಾಲ ನೆನೆಯಿಸಬೇಕು. ನಂತರ ಅದನ್ನು ಜಾಸ್ತಿ ನೀರು ಹಾಕದೇ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದನ್ನು ಗೋವೆಕಾಯಿಯ ಮಿಶ್ರಣಕ್ಕೆ ಸೇರಿಸ ಚೆನ್ನಾಗಿ ಕೈಯಾಡಿಸಿ ಮಿಶ್ರ ಮಾಡಬೇಕು.
ಬಹಳ ತೆಳು ಅನಿಸಿದರೆ ಸ್ವಲ್ಪ ಗಟ್ಟಿಯಾಗಲು ಒಲೆಯ ಮೇಲಿಟ್ಟು ಕೈಯಾಡಿಸಬೇಕು.
ತಣ್ಣಗಾದ ನಂತರ ಅರಿಶಿಣ ಎಲೆಯ ಹಿಂಬದಿಯಲ್ಲಿ ಹಚ್ಚಿ ನಾಲ್ಕು ಬದಿಯಲ್ಲಿ ಮಡಚಬೇಕು.
ಇದನ್ನು ಇಡ್ಲಿ ಪಾತ್ರೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಬೇಕು.
ತುಪ್ಪದೊಂದಿಗೆ ಸವಿಯಲು ಕಡಬು ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಅಕ್ಟೋಬರ್ 1, 2021

ಎಲವರಿಗೆ_ತಂಬುಳಿ



ಬೇಕಾಗುವ ಸಾಮಗ್ರಿ :
ಎಲವರಿಗೆ ಸೊಪ್ಪು - 1 ಹಿಡಿ (ಮುಷ್ಠಿ)
ಜೀರಿಗೆ - 1 ಚಮಚ
ಕಾಳು ಮೆಣಸು - 10/12
ಉಪ್ಪು - ರುಚಿಗೆ ತಕ್ಕಷ್ಟು
ಮಜ್ಜಿಗೆ - 1 ಲೋಟ
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿ ತುರಿ - 1/4 ಕಪ್

ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಸೊಪ್ಪನ್ನು ಸ್ವಚ್ಛಗೊಳಿಸಿ ಟಿಸಿಲಿನಿಂದ ಬೇರ್ಪಡಿಸಿ ಹಾಕಿ ಚೆನ್ನಾಗಿ ಹುರಿಯಬೇಕು.
ಇದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಹುರಿಯಬೇಕು.
ಇದಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಸೋಸಿದ ಮಿಶ್ರಣ ಮತ್ತು ರುಬ್ಬಿದ ಮಿಶ್ರಣಕ್ಕೆ ಬೆಲ್ಲ, ಉಪ್ಪು ಮತ್ತು ಮಜ್ಜಿಗೆ ಸೇರಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಆರೋಗ್ಯಕರವಾದ ಮತ್ತು ರುಚಿಯಾದ ಎಲವರಿಗೆ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಸೆಪ್ಟೆಂಬರ್ 17, 2021

ಒಂದೆಲಗ (ಬ್ರಾಹ್ಮಿ) ತಂಬುಳಿ




ಬೇಕಾಗುವ ಸಾಮಗ್ರಿ :
ಒಂದೆಲಗ (ಬ್ರಾಹ್ಮಿ) ಸೊಪ್ಪು - 1 ಹಿಡಿ (ಮುಷ್ಠಿ)
ಜೀರಿಗೆ - 1 ಚಮಚ
ಕಾಳು ಮೆಣಸು - 10/12
ಉಪ್ಪು - ರುಚಿಗೆ ತಕ್ಕಷ್ಟು
ಮಜ್ಜಿಗೆ - 1 ಲೋಟ
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿ ತುರಿ - 1/4 ಕಪ್
ಬೆಲ್ಲ - 1 ಚಮಚ

ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಒಂದೆಲಗ (ಬ್ರಾಹ್ಮಿ) ಸೊಪ್ಪನ್ನು ತೊಳೆದು ಹಾಕಿ ಚೆನ್ನಾಗಿ ಹುರಿಯಬೇಕು.
ಇದನ್ನು ಮಿಕ್ಸಿ ಮಾಡಿ ಸೋಸಿಕೊಳ್ಳಬೇಕು.
ಇದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಹುರಿಯಬೇಕು.
ಇದಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಸೋಸಿದ ಮಿಶ್ರಣ ಮತ್ತು ರುಬ್ಬಿದ ಮಿಶ್ರಣಕ್ಕೆ ಬೆಲ್ಲ, ಉಪ್ಪು ಮತ್ತು ಮಜ್ಜಿಗೆ ಸೇರಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಆರೋಗ್ಯಕರವಾದ ಮತ್ತು ರುಚಿಯಾದ ಮುಟ್ಟಿದರೆ ಮುನಿ ಸೊಪ್ಪಿನ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಮುಟ್ಟಿದರೆ ಮುನಿ ತಂಬುಳಿ


ಬೇಕಾಗುವ ಸಾಮಗ್ರಿ :
ಮುಟ್ಟಿದರೆ ಮುನಿ ಸೊಪ್ಪು - 1 ಹಿಡಿ (ಮುಷ್ಠಿ)
ಜೀರಿಗೆ - 1 ಚಮಚ
ಕಾಳು ಮೆಣಸು - 10/12
ಉಪ್ಪು - ರುಚಿಗೆ ತಕ್ಕಷ್ಟು
ಮಜ್ಜಿಗೆ - 1 ಲೋಟ
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿ ತುರಿ - 1/4 ಕಪ್
ಬೆಲ್ಲ - 1 ಚಮಚ

ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಮುಟ್ಟಿದರೆ ಮುನಿ ಸೊಪ್ಪನ್ನು ತೊಳೆದು ಹಾಕಿ ಚೆನ್ನಾಗಿ ಹುರಿಯಬೇಕು.
ಇದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಹುರಿಯಬೇಕು.
ಇದಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ರುಬ್ಬಿದ ಮಿಶ್ರಣಕ್ಕೆ ಬೆಲ್ಲ, ಉಪ್ಪು ಮತ್ತು ಮಜ್ಜಿಗೆ ಸೇರಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಆರೋಗ್ಯಕರವಾದ ಮತ್ತು ರುಚಿಯಾದ ಮುಟ್ಟಿದರೆ ಮುನಿ ಸೊಪ್ಪಿನ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ
 

ಗುರುವಾರ, ಸೆಪ್ಟೆಂಬರ್ 16, 2021

ಹಾಗಿಲಕಾಯಿ ಸಾಸಿವೆ

ಬೇಕಾಗುವ ಸಾಮಗ್ರಿ :
ಹಾಗಿಲಕಾಯಿ - 1
ಉಪ್ಪು - 1/2 ಚಮಚ & ರುಚಿಗೆ ತಕ್ಕಷ್ಟು
ಸಾಸಿವೆ ಕಾಳು - 1 ಚಮಚ
ಕಾಯಿ ತುರಿ - 1/2 ಕಪ್
ಮೊಸರು - 1/2 ಕಪ್ (ಹುಳಿಯಾಗಿದ್ದರೆ ಒಳ್ಳೆಯದು)
ಸೂಜಿಮೆಣಸು - 5/6
(ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಕೊಬ್ಬರಿ ಎಣ್ಣೆ - 2 ಚಮಚ

ಮಾಡುವ ವಿಧಾನ :
ಹಾಗಿಲಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ ಉಪ್ಪು ಸೇರಿಸಿ ಸ್ವಲ್ಪ ಸಮಯ ಬಿಡಬೇಕು.
ನಂತರ ಗಟ್ಟಿಯಾಗಿ ಹಿಂಡಿ ನೀರು ತೆಗೆದು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಎಣ್ಣೆ ಹಾಕಿ ಚೆನ್ನಾಗಿ ಹುರಿಯಬೇಕು.
ಮಿಕ್ಸಿ ಜಾರಿಗೆ ಕಾಯಿತುರಿ, ಸಾಸಿವೆ ಕಾಳು ಮತ್ತು ಸೂಜಿಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಹುರಿದ ಹಾಗಿಲಕಾಯಿ ಹೋಳಿಗೆ ರುಬ್ಬಿದ ಮಿಶ್ರಣ ಮತ್ತು ಮೊಸರು ಸೇರಿಸಬೇಕು.
ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
ಅನ್ನದ ಜೊತೆಗೆ ಸವಿಯಲು ಸಾಸಿವೆ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಬಾಳೆ ಹಣ್ಣಿನ ಬನ್ಸ್



ಬೇಕಾಗುವ ಸಾಮಗ್ರಿ :
ಗೋಧಿ ಹಿಟ್ಟು - ಬಾಳೆ ಹಣ್ಣಿನ ರಸ ಹಿಡಿಯುವಷ್ಟು
ಬಾಳೆಹಣ್ಣು - 4
ಸಕ್ಕರೆ - 4 ರಿಂದ 5 ಚಮಚ
ಜೀರಿಗೆ - 1 ಚಮಚ
ಅಡಿಗೆ ಸೋಡಾ - 1 ಚಿಟಿಕೆ
ಮೊಸರು - 2 ಸೌಟು ( ಹುಳಿ ಮೊಸರು ಉತ್ತಮ)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ :

🍌ಬಾಳೆ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರ್ ನಲ್ಲಿ ರುಬ್ಬಿಕೊಳ್ಳಬೇಕು.
🍌ಇದಕ್ಕೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಿಸಬೇಕು.
🍌ಈ ಮಿಶ್ರಣಕ್ಕೆ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿಗಿಂತ ಮೆದುವಾಗಿರಲಿ.
🍌ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್ ನ ಮೇಲೆ ಕೈಯಿಂದ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಬೇಕು.
🍌ಬಾಜಿ / ಸಾಂಬಾರು / ಕಾಯಿಚಟ್ನಿಯ ಜೊತೆಗೆ ಸವಿಯಿರಿ.

ಗ್ಲಾಸ್_ಸ್ಯಾಂಡ್_ವಿಚ್



ಬೇಕಾಗುವ ಸಾಮಗ್ರಿ :
ಕುಂಬಳಕಾಯಿ - 1/4 ಕೆ ಜಿ
ಸಕ್ಕರೆ - 1 ಕಪ್
ನೀರು - 1 1/2 ಕಪ್
ಸುಣ್ಣ - 1 ಚಮಚ
ಬಾದಾಮಿ - 15/20
ಹಾಲಿನ ಪುಡಿ - 5 ಟೀ ಚಮಚ
ಏಲಕ್ಕಿ - 1 ಚಿಟಿಕೆ
ಫುಡ್ ಕಲರ್ - 1 ಚಿಟಿಕೆ

ಮಾಡುವ ವಿಧಾನ :
ಮೊದಲು ಕುಂಬಳಕಾಯಿಯ ಸಿಪ್ಪೆ ತೆಗೆದು ಬೇಕಾದ ಆಕಾರದಲ್ಲಿ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
ಈ ಹೋಳುಗಳನ್ನು ಸುಣ್ಣದ ನೀರಿನಲ್ಲಿ 8-10 ಗಂಟೆ ನೆನೆಸಿಡಬೇಕು.
ನಂತರ ಸುಣ್ಣ ಹೋಗುವಂತೆ ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಬೇಕು.
ಸಕ್ಕರೆ ಫುಡ್ ಕಲರ್ ಮತ್ತು ನೀರು ಸೇರಿಸಿ ಕರಗಿಸಿಕೊಂಡು ಬೇಯಿಸಿದ ಕುಂಬಳಕಾಯಿ ಹೋಳು ಸೇರಿಸಿ ಎಳೆಪಾಕ ಮಾಡಿಕೊಳ್ಳಬೇಕು.
ಪಾಕದಿಂದ ತೆಗೆದು ಎರಡು ಗಂಟೆ ಒಣಗಲು ಬಿಡಬೇಕು.
ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಹಾಲು ಸೇರಿಸಿ ರುಬ್ಬಿಕೊಳ್ಳಬೇಕು.
ಈ ಮಿಶ್ರಣಕ್ಕೆ ಹಾಲಿನಪುಡಿ ಸೇರಿಸಿ ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕೈಯಾಡಿಸಬೇಕು.
ಉಂಡೆಯ ಹದಕ್ಕೆ ಬಂದಾಗ ಒಲೆ ಆರಿಸಿ ತಣ್ಣಗಾಗಲು ಬಿಡಬೇಕು.
ನಂತರ ಸಿದ್ಧ ಮಾಡಿಕೊಂಡ ಕುಂಬಳಕಾಯಿ ಹೋಳಿನ ಮೇಲೆ ಈ ಮಿಶ್ರಣ ತುಂಬಿ ಮತ್ತೊಂದು ಹೋಳಿನಿಂದ ಮುಟ್ಟಿದರೆ ಸ್ಯಾಂಡ್ ವಿಚ್ ಸವಿಯಲು ಸಿದ್ಧ.

ನಾನು ಡೆಸಿಕೆಟೆಡ್ ಕೊಕೊನಟ್ ನಿಂದ ಅಲಂಕರಿಸಿದ್ದೇನೆ.

ವೇದಾವತಿ ಭಟ್ಟ
ಮುಂಬೈ 

ಭಾನುವಾರ, ಸೆಪ್ಟೆಂಬರ್ 5, 2021

ಬಿಲ್ವಪತ್ರೆ ತಂಬುಳಿ



ಬೇಕಾಗುವ ಸಾಮಗ್ರಿ :
ಬಿಲ್ವಪತ್ರೆ - 15 ರಿಂದ 20 ಎಲೆ
ಜೀರಿಗೆ - 1 ಚಮಚ
ಕಾಳು ಮೆಣಸು - 8/10
ಕಾಯಿ ತುರಿ - 1/2 ಕಪ್
ಮಜ್ಜಿಗೆ - 1/2 ಲೋಟ
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಅಗತ್ಯಕ್ಕೆ ತಕ್ಕಷ್ಟು
ಕೊಬ್ಬರಿ ಎಣ್ಣೆ - 1 ಚಮಚ

ಮಾಡುವ ವಿಧಾನ :
ಪತ್ರೆ ಎಲೆಗಳನ್ನು ತೊಳೆದು ಎಣ್ಣೆ ಹಾಕಿ ಹುರಿಯಬೇಕು.
ಸರಿಯಾಗಿ ಹುರಿದ ನಂತರ ಕಾಳಮೆಣಸು ಮತ್ತು ಜೀರಿಗೆ ಸೇರಿಸಿ ಮತ್ತೆ ಸ್ವಲ್ಪ ಹುರಿದು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಮಜ್ಜಿಗೆ ಮತ್ತು ಬೇಕಾದಷ್ಟು ನೀರು ಸೇರಿಸಬೇಕು.
ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿದರೆ ರುಚಿಯಾದ ಆರೋಗ್ಯಕರ ತಂಬುಳಿ ಸಿದ್ಧ.

ಶುಕ್ರವಾರ, ಸೆಪ್ಟೆಂಬರ್ 3, 2021

ಗೋಧಿ ಹಾಲುಬಾಯಿ (ಮಣ್ಣಿ)



ಬೇಕಾಗುವ ಸಾಮಗ್ರಿ :
ಗೋಧಿ - 1 ಕಪ್
ಬೆಲ್ಲ - 1/2 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಉಪ್ಪು - 1/4 ಚಮಚ

ಮಾಡುವ ವಿಧಾನ :
ಗೋಧಿಯನ್ನು ರಾತ್ರಿಯೇ ನೆನಸಿಡಬೇಕು.
ನಂತರ ರುಬ್ಬಿ ಸೋಸಿ ಹಾಲು ತೆಗೆದುಕೊಳ್ಳಬೇಕು.
ಸ್ವಲ್ಪ ಸಮಯ ಬಿಟ್ಟರೆ ಗಟ್ಟಿಯಾದ ಹಾಲು ತಳದಲ್ಲಿ ಇರುತ್ತದೆ.
ಮೇಲಿನ ನೀರನ್ನು ಬಸಿದುಕೊಳ್ಳಬೇಕು.
ದಪ್ಪ ತಳದ ಪಾತ್ರೆಗೆ ಹಾಕಿ ಬೆಲ್ಲ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಗಂಟಿಲ್ಲದಂತೆ ಕೊಡಬೇಕು.
ಸಣ್ಣ ಉರಿಯಲ್ಲಿ ಬಿಡದಂತೆ ಕೈಯಾಡಿಸಬೇಕು.
ತಳ ಬಿಡುತ್ತ ಬಂದಾಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಬೇಕು.
ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ತುಪ್ಪ ಅಥವಾ ಕಾಯಿಹಾಲಿನ ಜೊತೆ ಸವಿಯಬೇಕು.


ವೇದಾವತಿ ಭಟ್ಟ 

ಗುರುವಾರ, ಸೆಪ್ಟೆಂಬರ್ 2, 2021

ಜಿಲೇಬಿ

ಜಿಲೆಬಿ

ಬೇಕಾಗುವ ಸಾಮಗ್ರಿ :
ಮೈದಾ ಹಿಟ್ಟು - 1 ಕಪ್
ಮೊಸರು - 4 ಚಮಚ
ಬೇಕಿಂಗ್ ಸೋಡಾ - 1 ಚಿಟಿಕೆ
ಕಾರ್ನ್ ಫ್ಲೋರ್ - 4 ಚಮಚ
ಉಪ್ಪು - 1 ಚಿಟಿಕೆ
ನೀರು - 100 ಎಂ ಎಲ್
ಸಕ್ಕರೆ - 3 ಕಪ್ (ನೀರು 1 1/2 ಕಪ್)
ನಿಂಬೆ ರಸ - 2 ಚಮಚ
ಫುಡ್ ಕಲರ್ - 1 ಚಿಟಿಕೆ

ಮಾಡುವ ವಿಧಾನ :
ಒಂದು ಬೌಲ್ ಗೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಮೊಸರು, ಉಪ್ಪು ಹಾಗೂ ನೀರು ಸೇರಿಸಿ ಚೆನ್ನಾಗಿ ಕಲಿಸಬೇಕು.
ಕಲಿಸಿದ ಮಿಶ್ರಣವನ್ನು ಎರಡು ಗಂಟೆ ಹಾಗೆಯೇ ಬಿಡಬೇಕು.
ಮತ್ತೊಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆ ಸೇರಿಸಿ ಎಳೆ ಪಾಕ ಮಾಡಿಕೊಳ್ಳಬೇಕು. ಈ ಪಾಕಕ್ಕೆ ನಿಂಬೆ ರಸ ಮತ್ತು ಫುಡ್ ಕಲರ್ ಸೇರಿಸಬೇಕು.
ಸಿದ್ಧವಾದ ಹಿಟ್ಟನ್ನು ಜಿಲೇಬಿ ಮೇಕರ್ ಅಥವಾ ಕೊಟ್ಟೆಗೆ
ಹಾಕಿ ಬಿಸಿ ಎಣ್ಣೆಯಲ್ಲಿ ಕರಿಯಬೇಕು.
ಇದನ್ನು ಸಕ್ಕರೆ ಪಾಕಕ್ಕೆ ಹಾಕಿ ಸ್ವಲ್ಪ ಸಮಯದ ನಂತರ ಡಬ್ಬದಲ್ಲಿ ತುಂಬಿಡಬೇಕು.

ಸಕ್ಕರೆ ಪಾಕ ತಯಾರಿಸಲು 3 ಕಪ್ ಸಕ್ಕರೆಗೆ 1 1/2 ಕಪ್ ನೀರು ಸೇರಿಸಿ ನಿಂಬೆ ರಸ ಮತ್ತು ಫುಡ್ ಕಲರ್ ಹಾಕ ಎಳೆಪಾಕ ಮಾಡಿಕೊಳ್ಳುಬೇಕು.

ವೇದಾವತಿ ಭಟ್ಟ
ಮುಂಬೈ 

ಭಾನುವಾರ, ಆಗಸ್ಟ್ 29, 2021

ಹೋಳಿಗೆ

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು

#ಗೌರಿ_ಗಣೇಶ_ಹಬ್ಬದ_ಸ್ಪೆಷಲ್_ಥೀಮ್_ಬೆಲ್ಲ

#ರೆಸಿಪಿ_20

#ಹೆಸರು_ಬೇಳೆ_ಮತ್ತು_ಕಡಲು_ಬೇಳೆ_ಹೋಳಿಗೆ

ಬೇಕಾಗುವ ಸಾಮಗ್ರಿ :
💐ಹೆಸರು ಬೇಳೆ - 1 ಕಪ್
💐ಕಡಲೆ ಬೇಳೆ - 1 ಕಪ್
💐ಬೆಲ್ಲ - 1 1/2 ಕಪ್
💐ರವಾ - 1 ಕಪ್
💐ಗೋಧಿ ಹಿಟ್ಟು - 1 ಕಪ್ (ಸುಮಾರು)
💐ಅರಿಶಿಣ - 1 ಚೀಟಿ
💐ನೀರು - ಅಗತ್ಯಕ್ಕೆ ತಕ್ಕಷ್ಟು
💐ಉಪ್ಪು - 1/4 ಚಮಚ
💐ಎಣ್ಣೆ - 1/2 ಲೋಟ

ಮಾಡುವ ವಿಧಾನ :
💐ಮೊದಲು ಕಡಲೆ ಬೇಳೆ ಮತ್ತು ಹೆಸರು ಬೇಳೆಯನ್ನು ಅರ್ಧ ಗಂಟೆ ನೆನೆಸಿ ಕುಕ್ಕರ್ ನಲ್ಲಿ ಹಾಕಿ 5 ಲೋಟ ನೀರು ಹಾಕಿ 5 ರಿಂದ 6 ಸೀಟಿ ಹಾಕಿಸಬೇಕು.
💐ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಬೆಲ್ಲ ಸೇರಿಸಿ ಎಳೆಪಾಕ ಮಾಡಿ ತಣ್ಣಗಾದ ನಂತರ ಉಂಡೆ ಮಾಡಿಕೊಳ್ಳಬೇಕು. ಇದು ಹೋಳಿಗೆಯ ಹೂರ್ಣ.
💐ರವಾವನ್ನು ಸ್ವಲ್ಪ ನೀರು ಹಾಕಿ ನೆನೆಸಿ ನೀರು ಹಾಕದೇ ರುಬ್ಬಿಕೊಳ್ಳಬೇಕು.
💐ಇದಕ್ಕೆ ಒಂದು ಚಿಟಿಕೆ ಅರಿಶಿಣ, ಉಪ್ಪು ಸೇರಿಸಿ ಕಲಸಿ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಮೆತ್ತಗೆ ಕಲಸಿಕೊಳ್ಳಬೇಕು.
ಇದರ ಮೇಲೆ ಎಣ್ಣೆ ಹಾಕಿ ಒಂದು ಗಂಟೆ ಬಿಡಬೇಕು. ಇದು ಕಣಕ.
💐ನಂತರ ಕಣಕದ ಒಳಗೆ ಹೂರ್ಣದ ಉಂಡೆ ಹಾಕಿ ಲಟ್ಟಿಸಿ ಬೇಯಿಸಬೇಕು.

ತುಪ್ಪ ಹಾಗೂ ಸಕ್ಕರೆ ಪಾಕದ ಜೊತೆಗೆ ಸವಿಯಬೇಕು.

ವೇದಾವತಿ ಭಟ್ಟ
ಮುಂಬೈ 

ಬುಧವಾರ, ಆಗಸ್ಟ್ 25, 2021

ಅಕ್ಕಿತರಿ (ಅಕ್ಕಿ ಕಡಿ) ಉಪ್ಪಿಟ್ಟು

ಅಕ್ಕಿತರಿ (ಅಕ್ಕಿ ಕಡಿ) ಉಪ್ಪಿಟ್ಟು

ಬೇಕಾಗುವ ಸಾಮಗ್ರಿ :
ಅಕ್ಕಿತರಿ - 1 1/2 ಕಪ್
ಈರುಳ್ಳಿ - 1
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕರಿಬೇವಿನ ಸೊಪ್ಪು - 6/7
ಹಸಿಮೆಣಸಿನಕಾಯಿ - 2
ಸಾಸಿವೆ - 1 ಚಮಚ
ಕೊಬ್ಬರಿ ಎಣ್ಣೆ - 2 ಚಮಚ
ಕ್ಯಾರೆಟ್ - 1
ಬೀನ್ಸ್ - 10/15
ಕಾಯಿತುರಿ - 1/2 ಕಪ್
ಸಾಸಿವೆ - 1 ಚಮಚ
ಅರಿಶಿಣ - 1 ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ನೀರು - 4 ಲೋಟ

ಮಾಡುವ ವಿಧಾನ :
ಮೊದಲು ಅಕ್ಕಿತರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಅರಿಶಿಣ ಹಾಕಿ ಸಾಸಿವೆ ಸಿಡಿಸಿ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಕೈಯಾಡಿಸಿ ಹೆಚ್ಚಿದ ಕ್ಯಾರೆಟ್, ಬೀನ್ಸ್ ಮತ್ತು ಕಾಯಿತುರಿ ಹಾಕಿ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 4 ಲೋಟ ನೀರು ಹಾಕಿ ಬೇಯಿಸಬೇಕು.
ನೀರು ಬೇಕಾದಲ್ಲಿ ಸೇರಿಸಿ ಸರಿಯಾಗಿ ಬೇಯಿಸಿ ಸಕ್ಕರೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಬೇಕು.

ಹಸಿಬಟಾಣಿ ಅಥವಾ ನಿಮ್ಮ ಇಷ್ಟದ ಬೇರೆ ತರಕಾರಿ ಸೇರಿಸಬಹುದು.

ವೇದಾವತಿ ಭಟ್ಟ
ಮುಂಬೈ 

ಮಂಗಳವಾರ, ಆಗಸ್ಟ್ 24, 2021

ಕ್ಯಾಪ್ಸಿಕಂ ಗ್ರೇವಿ


ಬೇಕಾಗುವ ಸಾಮಗ್ರಿ :
ಕ್ಯಾಪ್ಸಿಕಂ - 4/5
ಕಾಯಿತುರಿ - 1/4 ಕಪ್
ಶೇಂಗಾ - 2 ಚಮಚ
ಎಳ್ಳು - 1 ಚಮಚ
ಜೀರಿಗೆ - 1/2 ಚಮಚ + 1 ಚಮಚ
ಕೊತ್ತಂಬರಿ - 1 ಚಮಚ
ಮೆಂತ್ಯ - 1/4 ಚಮಚ
ಒಣ ಮೆಣಸಿನ ಕಾಯಿ - 3/4
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಈರುಳ್ಳಿ - 1 (ದೊಡ್ಡದು)
ಟೊಮಾಟೊ - 1
ಕರಿ ಬೇವಿನ ಸೊಪ್ಪು - 6/7
ಎಣ್ಣೆ - 1 ಚಮಚ + 2 ಚಮಚ

ಮಾಡುವ ವಿಧಾನ :
ಬಾಣಲೆಯಲ್ಲಿ ಶೇಂಗಾವನ್ನು ಹುರಿದುಕೊಳ್ಳುಬೇಕು.
ನಂತರ ಎಳ್ಳನ್ನು ಸಹ ಎಣ್ಣೆ ಹಾಕದೇ ಹುರಿದುಕೊಳ್ಳಬೇಕು.
ನಂತರ ಅದೇ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಕೊತ್ತಂಬರಿ, 1/2 ಚಮಚ ಜೀರಿಗೆ, ಮೆಂತ್ಯ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಬೇಕು.
ಈ ಎಲ್ಲವನ್ನೂ ಮಿಕ್ಸಿ ಮಾಡಿಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಜೀರಿಗೆ ಹಾಕಿ ಹುರಿದು ಸಣ್ಣಗೆ ಹೆಚ್ಚಿದ ಅರ್ಧ ಭಾಗ ಈರುಳ್ಳಿ ಹಾಕಿ ಹುರಿಯಬೇಕು.
ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಿ ಹೆಚ್ಚಿದ ಕ್ಯಾಪ್ಸಿಕಂ ಮತ್ತು ಟೊಮಾಟೊ ಹೋಳು ಹಾಕಿ ಹುರಿಯಬೇಕು.
ಉಪ್ಪು ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಕುದಿಸಬೇಕು.
ಉಳಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಬೇಕು.

ಸೋಮವಾರ, ಆಗಸ್ಟ್ 23, 2021

ತಾಳಿಪೀಟು

ತಾಳಿಪೀಟು (ಅಕ್ಕಿ ರೊಟ್ಟಿ)

ಬೇಕಾಗುವ ಸಾಮಗ್ರಿ :
ಅಕ್ಕಿ ಹಿಟ್ಟು - ಸುಮಾರು 2 ಕಪ್
ಈರುಳ್ಳಿ - 2
ಕರಿ ಬೇವಿನ ಸೊಪ್ಪು - 7/8
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ - 1/2 ಇಂಚ್
ಹಸಿಮೆಣಸಿನಕಾಯಿ - 2
ಕಾಯಿ ತುರಿ - 1 ಹಿಡಿ
ಬೀಟ್ರೂಟ್ ತುರಿ - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಈರುಳ್ಳಿ, ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಒಂದು ಪಾತ್ರೆಗೆ ಹಾಕಬೇಕು.
ಕಾಯಿ ತುರಿ ಮತ್ತು ಬಿಟ್ರೂಟ್ ತುರಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಬೇಕು.
ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟು ಹಾಕಿ ಕೈಯಾಡಿಸಬೇಕು.
ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಬೇಕು.

ಬೆಳಗಿನ ಉಪಹಾರಕ್ಕೆ ಬಹಳ ಚೆನ್ನಾಗಿರುತ್ತದೆ.

ಗುರುವಾರ, ಜುಲೈ 15, 2021

ನೆಲ ನೆಲ್ಲಿ ತಂಬುಳಿ (Phyllanthus Niruri)



ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾದ ಸಸ್ಯ. ಕಾಮಾಲೆ, ಬೇಧಿ ಇವುಗಳಿಗೆ ಔಷಧವಾಗಿ ಬಳಕೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ :
ನೆಲನೆಲ್ಲಿ ಸೊಪ್ಪು - ಒಂದು ಮುಷ್ಟಿ
ಜೀರಿಗೆ - 1 ಚಮಚ
ಕಾಳು ಮೆಣಸು - 1/2 ಚಮಚ
ಮಜ್ಜಿಗೆ - 1 ಕಪ್
ಕಾಯಿತುರಿ - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಕೊಬ್ಬರಿ ಎಣ್ಣೆ - 3 ಚಮಚ
ಸಾಸಿವೆ ಕಾಳು - 1/2 ಚಮಚ

ಮಾಡುವ ವಿಧಾನ :
ತೊಳೆದು ಸ್ವಚ್ಛಗೊಳಿಸಿದ ನೆಲನೆಲ್ಲಿ ಸೊಪ್ಪನ್ನು 2 ಚಮಚ ಕೊಬ್ಬರಿ ಎಣ್ಣೆ ಹುರಿಯಬೇಕು.
ಸ್ವಲ್ಪ ಹುರಿದ ನಂತರ ಕಾಳಮೆಣಸು ಹಾಕಿ ಹುರಿದು ಕೊನೆಯಲ್ಲಿ ಜೀರಿಗೆ ಹಾಕಿ ಹುರಿಯಬೇಕು.
ನಂತರ ಕಾಯಿತುರಿಯೊಂದಿಗೆ ಸೇರಿಸಿ ರುಬ್ಬಿಕೊಳ್ಳಬೇಕು.
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನೀರು ಮತ್ತು ಮಜ್ಜಿಗೆ ಸೇರಿಸಬೇಕು.
ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಸೇರಿಸಿದರೆ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಮಂಗಳವಾರ, ಜುಲೈ 13, 2021

ತೊಂಡೆ ಕಾಯಿ-ಕಾಜು ಮಸಾಲ



ಬೇಕಾಗುವ ಸಾಮಗ್ರಿ :
ತೊಂಡೆಕಾಯಿ - 1/4 ಕೆ.ಜಿ
ಗೋಡಂಬಿ - 1/2 ಕಪ್
ಟೊಮಾಟೊ - 3
ಈರುಳ್ಳಿ - 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಜೀರಿಗೆ - 1 ಚಮಚ
ಅರಿಶಿಣ - 1 ಚಿಟಿಕೆ
ಗರಂ ಮಸಾಲ - 1/2 ಚಮಚ
ಮೆಣಸಿನ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಚಕ್ಕೆ - 1/4 ಇಂಚು
ಪಲಾವ್ ಎಲೆ - 1
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 6 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಸೂರಿ ಮೇಥಿ - ಸ್ವಲ್ಪ
ಸಕ್ಕರೆ - 1/4 ಚಮಚ

ಮಾಡುವ ವಿಧಾನ :
🍇 ಒಂದು ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಹುರಿದುಕೊಳ್ಳಬೇಕು.
🍇 ಗೋಲಾಕಾರವಾಗಿ ಹೆಚ್ಚಿದ ತೊಂಡೆಕಾಯಿ ಹೋಳುಗಳನ್ನು 2 ಚಮಚ ಎಣ್ಣೆ ಹಾಕಿ ಹುರಿದು ಪಕ್ಕಕ್ಕೆ ಇಡಬೇಕು.
🍇 ಮತ್ತೆ ಅದೇ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಬಾಡಿಸಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಬೇಕು.
🍇 ಸಣ್ಣಗೆ ಹೆಚ್ಚಿದ ಟೊಮಾಟೊ ಹೋಳುಗಳನ್ನೂ ಸೇರಿಸಿ ಚೆನ್ನಾಗಿ ಬಾಡಿಸಿ ತಣಿಯಲು ಬಿಡಬೇಕು.
🍇 ತಣ್ಣಗಾದ ನಂತರ ಈ ಮಿಶ್ರಣಕ್ಕೆ 5/6 ಗೋಡಂಬಿ ಸೇರಿಸಿ ರುಬ್ಬಿಕೊಳ್ಳಬೇಕು.
🍇 ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಚಕ್ಕೆ ಮತ್ತು ಪಲಾವ್ ಎಲೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಬೇಕು. ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಬೇಕು.
🍇 ಹುರಿದ ಗೋಡಂಬಿ ಮತ್ತು ತೊಂಡೆಕಾಯಿ ಸೇರಿಸಬೇಕು.
🍇 ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
🍇 ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲ ಪುಡಿ ಸೇರಿಸಿ ಕುದಿಸಬೇಕು.
🍇 1 ಚಮಚ ಕ್ರೀಮ್ ಸೇರಿಸಬೇಕು.
🍇 ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಮತ್ತು ಸಕ್ಕರೆ ಸೇರಿಸಬೇಕು.
🍇 ಚಪಾತಿ ಅಥವಾ ರೊಟ್ಟಿ ಜೊತೆಗೆ ಸವಿಯಲು ತೊಂಡೆಕಾಯಿ-ಕಾಜು ಮಸಾಲ ಸಿದ್ಧವಾಯಿತು.

ಡೋಕ್ಲ

ಡೋಕ್ಲ

ಇದು ಗುಜರಾತಿನ ಪ್ರಸಿದ್ಧ ತಿನಿಸು. ಕಡಲೆ ಹಿಟ್ಟಿನಿಂದ ಬಗೆಬಗೆಯ ಖಾದ್ಯ ತಯಾರಿಸುವುದು ಅವರ ವಿಶೇಷತೆ ಎನ್ನಬಹುದು.

ಬೇಕಾಗುವ ಸಾಮಗ್ರಿ :
ಕಡಲೆ ಹಿಟ್ಟು - 1.5 ಕಪ್
ಚಿರೋಟಿ ರವಾ - 3 ಚಮಚ
ನೀರು - 1 ಕಪ್
ಉಪ್ಪು - 3/4 ಚಮಚ
ನಿಂಬೆ ರಸ - 1 ಚಮಚ
ಸಕ್ಕರೆ - 1 ಚಮಚ
ಎಣ್ಣೆ - 1 ಚಮಚ
ಅರಿಶಿಣ - 1 ಚಿಟಿಕೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಹಸಿಮೆಣಸಿನ ಕಾಯಿ - 1
ಏನೋ - 1 ಚಮಚ

ಒಗ್ಗರಣೆಗೆ :
ಎಣ್ಣೆ - 1 ಚಮಚ
ನೀರು - 1/2 ಕಪ್
ನಿಂಬೆ ರಸ - 1 ಚಮಚ
ಜೀರಿಗೆ - 1/2 ಚಮಚ
ಎಳ್ಳು - 1/2 ಚಮಚ
ಸಾಸಿವೆ - 1/2 ಚಮಚ
ಉಪ್ಪು - 1/4 ಚಮಚ
ಸಕ್ಕರೆ - 1ಚಮಚ
ಕರಿಬೇವು - 7/8 ಎಲೆ

ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಚಿರೋಟಿ ರವಾ, ಉಪ್ಪು, ಸಕ್ಕರೆ, ಅರಿಶಿಣ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಹಾಗೂ ನೀರು ಸೇರಿಸಿ ಚೆನ್ನಾಗಿ ಕಲಿಸಬೇಕು.
ಒಂದೇ ಬದಿಯಿಂದ ಚೆನ್ನಾಗಿ ಕಲಿಸಬೇಕು.
20 ನಿಮಿಷ ಹಾಗೆಯೇ ಬಿಡಬೇಕು.
ನಂತರ ಒಂದು ಚಮಚ ಏನೋ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಿಸಬೇಕು.
ಎಣ್ಣೆ ಸವರಿದ ಪಾತ್ರೆಗೆ ಹಾಕಿ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಬೇಕು.

ತಣ್ಣಗಾದ ಮೇಲೆ ಕತ್ತರಿಸಿ ಒಗ್ಗರಣೆ ಮೇಲೆ ಹಾಕಿ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು.


ಸೋಮವಾರ, ಜುಲೈ 12, 2021

ಮುದ್ದೆ ಕಡಬು (ಕಾಯಿ ಕಡಬು)


ತೊಂಡೆಕಾಯಿ ಥೀಮ್ ನಲ್ಲಿ ಟಾಪ್ ಸ್ಥಾನ ಪಡೆದ ಖುಷಿಗೆ ನಮ್ಮ ಸಾಂಪ್ರದಾಯಿಕ ಸಿಹಿಯೊಂದಿಗೆ ಬಂದಿದ್ದೇನೆ. ಅಡುಗೆ ಅರಮನೆಯ ಅಡ್ಮಿನ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಹಾಗೂ ಪ್ರೋತ್ಸಾಹಿಸಿದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಧನ್ಯವಾದಗಳು.

ಸಾಂಪ್ರದಾಯಿಕ ಸಿಹಿ ತಿಂಡಿ - ನಮ್ಮ ಮಲೆನಾಡಿನಲ್ಲಿ ಬಹಳ ಪ್ರಸಿದ್ಧವಾದ ಕಡಬು ಇದು. ಅಕ್ಕಿ, ಕಾಯಿ ಮತ್ತು ಬೆಲ್ಲದಿಂದ ಬಗೆ ಬಗೆಯ ತಿಂಡಿ ತಯಾರಿಸುವುದು ನಮ್ಮಲ್ಲಿಯ ವಿಶೇಷ. ಕೆಲವು ಹಬ್ಬದಲ್ಲಿಯೂ ದೇವರ ನೈವೇದ್ಯಕ್ಕೆ ಕಡಬು ತಯಾರಿಸುವ ಸಂಪ್ರದಾಯವಿದೆ.

ಬೇಕಾಗುವ ಸಾಮಗ್ರಿ :
ಅಕ್ಕಿ - 1 ಕಪ್
ಬೆಲ್ಲ - 1/4 ಕಪ್ + 1/4 ಕಪ್
ಏಲಕ್ಕಿ - 2
ಕಾಯಿತುರಿ - 1 ಕಪ್
ಉಪ್ಪು - 1/2 ಚಮಚ

ಮಾಡುವ ವಿಧಾನ :
ಅಕ್ಕಿಯನ್ನು ಕನಿಷ್ಠ 6 ಗಂಟೆ ನೆನೆಸಿ (ಜಾಸ್ತಿ ನೆನಸಬಹುದು) ಚೆನ್ನಾಗಿ ತೊಳೆದು ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ರುಬ್ಬಿದ ಮಿಶ್ರಣಕ್ಕೆ ನೀರು ಸೇರಿಸಿ ದೋಸೆ ಹಿಟ್ಟಿಗಿಂತಲೂ ತೆಳ್ಳಗೆ ಕರಡಿಕೊಳ್ಳಬೇಕು.
ಈ ಮಿಶ್ರಣಕ್ಕೆ 1/4 ಕಪ್ ಬೆಲ್ಲ, ಉಪ್ಪು ಸೇರಿಸಿ ಸರಿಯಾಗಿ ಕೈಯಾಡಿಸಬೇಕು.
ಸಣ್ಣ ಉರಿಯಲ್ಲಿ ಹಿಟ್ಟನ್ನು ಕೈಯಾಡಿಸುತ್ತಾ ಉಂಡೆ ಕಟ್ಟುವ ಹದಕ್ಕೆ ತರಬೇಕು.
(ತಳ ಬಿಡುವವರೆಗೆ ಮಗಚುತ್ತಿರಬೇಕು)
ಇದನ್ನು ತಣ್ಣಗಾಗಲು ಬಿಡಬೇಕು.
ಅಲ್ಲಿಯವರೆಗೆ ಕಾಯಿತುರಿಗೆ ಬೆಲ್ಲ ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
ತಣ್ಣಗಾದ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಅದರೊಳಗೆ ಕಾಯಿತುರಿಯ ಮಿಶ್ರಣ ಸೇರಿಸಿ ಉಂಡೆ ಮಾಡಬೇಕು.
ಈ ಉಂಡೆಯನ್ನು ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಬೇಕು. (ಇಡ್ಲಿ ಬೇಯಿಸಿದಂತೆಯೇ ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಉಗಿಯಲ್ಲಿ ಬೇಯಿಸಬೇಕು)
ತುಪ್ಪದ ಜೊತೆ ತಿನ್ನಲು ರುಚಿಯಾಗಿರುತ್ತದೆ.

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಜುಲೈ 9, 2021

ಮಾಡ ಹಾಗಿಲು ಕಾಯಿ (Spiny Gourd) ಪಲ್ಯ




ಕಂಟೋಳ

ಬಹಳ ಸರಳವಾದ ರೆಸಿಪಿ ಇದು. ಯಾವುದೇ ಮಸಾಲೆಯನ್ನು ಬಳಸದೆ ಮಾಡಿದ್ದೇನೆ. ಮಹಾರಾಷ್ಟ್ರದಲ್ಲಿ ಕಂಟೋಳ ಎಂದು ಹೇಳುತ್ತಾರೆ. ಈ ಮಳೆಗಾಲದ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಸಾಮಾನ್ಯ ನೆಗಡಿ-ಶೀತ ಬರುವುದಿಲ್ಲ ಎಂದು ಹೇಳುತ್ತಾರೆ.

ಬೇಕಾಗುವ ಸಾಮಗ್ರಿ :
ಮಾಡ ಹಾಗಿಲು ಕಾಯಿ - 20/25
ಕಾಯಿತುರಿ - 1/2 ಕಪ್
ಈರುಳ್ಳಿ - 1
ಕೊಬ್ಬರಿ ಎಣ್ಣೆ - 4 ಚಮಚ
ಸಾಸಿವೆ ಕಾಳು - 1/2 ಚಮಚ
ಅರಿಶಿಣ - 1 ಚಿಟಿಕೆ
ಇಂಗು - 1 ಚಿಟಿಕೆ
ಹಸಿಮೆಣಸಿನಕಾಯಿ - 1
ಹುಳಿಪುಡಿ - 1/2 ಚಮಚ
(ಹುಣಸೆ ರಸ ಅಥವಾ ಆಮ್ಚೂರ್ ಬಳಸಬಹುದು)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮಾಡ ಹಾಗಿಲು ಕಾಯಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಮೇಲೆ ಅರಿಶಿಣ, ಸಾಸಿವೆ ಕಾಳು, ಹಸಿ ಮೆಣಸಿನ ಕಾಯಿ ಹಾಕಿ ಸಾಸಿವೆ ಸಿಡಿಸಬೇಕು.
ನಂತರ ಹೆಚ್ಚಿದ ಮಾಡ ಹಾಗಿಲು ಕಾಯಿ ಹೋಳನ್ನು ಹಾಕಿ ಹುರಿಯಬೇಕು. ಉಪ್ಪು ಮತ್ತು ಹುಳಿ ಪುಡಿ ಸೇರಿಸಿ ಮತ್ತೂ ಸ್ವಲ್ಪ ಹುರಿಯಬೇಕು.
ನಂತರ ಕಾಯಿತುರಿ ಸೇರಿಸಿ ಸ್ವಲ್ಪ ಸಮಯದ ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಹುರಿಯಬೇಕು.

ಬುಧವಾರ, ಜುಲೈ 7, 2021

ಬನಾರಸಿ ಟೊಮಾಟೊ ಚಟ್ನಿ



ಬೇಕಾಗುವ ಸಾಮಗ್ರಿ :
ಟೊಮಾಟೊ - 2 ರಿಂದ 3
ಆಲೂಗಡ್ಡೆ - 1
ಚಾಟ್ ಮಸಾಲ - 1/2 ಚಮಚ
ಗರಂ ಮಸಾಲ - 1 ಚಮಚ
ಮೆಣಸಿನ ಪುಡಿ - 1 ಚಮಚ
ತುಪ್ಪ - 2 ರಿಂದ 3 ಚಮಚ
ಗೋಡಂಬಿ ಚೂರು - 3 ಚಮಚ
ಜೀರಿಗೆ ಪುಡಿ - 1/2 ಚಮಚ
ಕೊತ್ತಂಬರಿ ಪುಡಿ - 1/2 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಪುದೀನಾ ಸೊಪ್ಪು - ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 2 ಚಮಚ
ನೀರು - ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ :

ಬಾಣಲೆಯಲ್ಲಿ ತುಪ್ಪ ಹಾಕಿ ಗೊಡಂಬಿ ಚೂರುಗಳನ್ನು ಹುರಿಯಬೇಕು.
ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮಾಟೊ ಸಣ್ಣಗೆ ಹೆಚ್ಚಿ ಸೇರಿಸಿ ಕೈಯಾಡಿಸಬೇಕು.
ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿ ಸೇರಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ಹಾಕಿ ಕುದಿಸಬೇಕು.
ಇದಕ್ಕೆ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲ, ಗರಂ ಮಸಾಲ ಸೇರಿಸಿ ಬೆಲ್ಲ ಸೇರಿಸಿ ಕುದಿಸಬೇಕು.
ನೀರು ಬೇಕಾದರೆ ಸೇರಿಸಿ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು ಸೇರಿಸಿ ಕುದಿಸಬೇಕು.

ಅಕ್ಕಿ ಕಡಿ (ಅಕ್ಕಿ ರವೆ) ಉಪ್ಪಿಟ್ಟು


ಬೇಕಾಗುವ ಸಾಮಗ್ರಿ :
ಅಕ್ಕಿ ಕಡಿ - 1 ಲೋಟ
ನೀರು - 4 ಲೋಟ
ಕ್ಯಾರೆಟ್ - 1
ಹಸಿಮೆಣಸಿನ ಕಾಯಿ - 1
ಕಾಯಿತುರಿ - 1/2 ಲೋಟ
ಶುಂಠಿ - 1/2 ಇಂಚು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಟೀ ಚಮಚ
ಅರಿಶಿಣ - 1 ಚಿಟಿಕೆ
ಸಕ್ಕರೆ - 1 ಚಮಚ

ಮಾಡುವ ವಿಧಾನ :

ಮೊದಲು ಅಕ್ಕಿ ಕಡಿಯನ್ನು ತೊಳೆದು ಹುರಿದು ಪಕ್ಕಕ್ಕೆ ಇಟ್ಟು ಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅರಿಶಿಣ, ಸಾಸಿವೆ ಕಾಳು, ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಕೈಯಾಡಿಸಬೇಕು.
ಜಜ್ಜಿದ ಶುಂಠಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕ್ಯಾರೆಟ್, ಕಾಯಿತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ 2 ಲೋಟ ನೀರು ಹಾಕಿ ಬೇಯಿಸಬೇಕು.
ನಂತರ ಹುರಿದಿಟ್ಟ ಅಕ್ಕಿ ಕಡಿ ಮತ್ತೆ ಎರಡು ಲೋಟ ನೀರು ಮತ್ತು ಸಕ್ಕರೆ ಸೇರಿಸಿ ನೀರು ಆರುವವವರೆಗೆ ಕೈಯಾಡಿಸದರೆ ಉಪ್ಪಿಟ್ಟು ಸಿದ್ಧವಾಯಿತು. 

ಆಪಲ್ ಕೇಕ್



ಬೇಕಾಗುವ ಸಾಮಗ್ರಿ :
ಬ್ರೆಡ್ ಪುಡಿ - 1 ಕಪ್
ಕೊಕೊ ಪೌಡರ್ - 1 ಚಮಚ
ಹಾಲಿನ ಪುಡಿ - 2 ಚಮಚ
ಸಕ್ಕರೆ ಪುಡಿ - 1/4 ಕಪ್
ನೀರು - 1/2 ಕಪ್
ತುಪ್ಪ - 1 ಚಮಚ
ಡೆಸಿಕೆಟೆಡ್ ಕೊಕೊನಟ್ - 1 ಕಪ್

ಮಾಡುವ ವಿಧಾನ :
ಮೊದಲು ಬಾಣಲೆಯಲ್ಲಿ ಸಕ್ಕರೆ ಪುಡಿ ಮತ್ತು ನೀರು ಹಾಕಿ ಎಳೆಯ ಪಾಕ ಮಾಡಿಕೊಳ್ಳಬೇಕು.
ಇದಕ್ಕೆ ಕೊಕೊ ಪೌಡರ್, ಹಾಲಿನ ಪುಡಿ ಹಾಕಿ ಕೈಯಾಡಿಸಬೇಕು.
ನಂತರ ಡೆಸಿಕೆಟೆಡ್ ಕೊಕೊನಟ್, ಬ್ರೆಡ್ ಪುಡಿ ಹಾಕಿ ತುಪ್ಪ ಹಾಕಿ ತಳ ಬಿಡುವವರೆಗೆ ಕೈಯಾಡಿಸಬೇಕು.
ಒಲೆ ಆರಿಸಿ ತಣ್ಣಗಾದ ಮೇಲೆ ಉಂಡೆ ಮಾಡಿ ಉಳಿದ ಡೆಸಿಕೆಟೆಡ್ ಕೊಕೊನಟ್ ನಲ್ಲಿ ಹೊರಳಿಸಬೇಕು.

ಮಾವಿನ ಹಣ್ಣಿನ ನೀರ್ಗೊಜ್ಜು




ಬೇಕಾಗುವ ಸಾಮಗ್ರಿ :
ಮಾವಿನ ಹಣ್ಣು - 5 ರಿಂದ 6
(ಹುಳಿ ಇರುವ ಮಾವಿನ ಹಣ್ಣಾದರೆ ಒಳ್ಳೆಯದು)
ಬೆಳ್ಳುಳ್ಳಿ - 7/8 ಎಸಳು
ಕೊಬ್ಬರಿ ಎಣ್ಣೆ - 3 ಚಮಚ
ಸಾಸಿವೆ ಕಾಳು - 1 ಚಮಚ
ಒಣಮೆಣಸಿನಕಾಯಿ - 3 ರಿಂದ 4
ಬೆಲ್ಲ - 1 ಸೌಟು
(ಹುಳಿ ಇದ್ದರೆ ಜಾಸ್ತಿ ಬಳಸಬಹುದು)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಬೇಕು.
ಇದಕ್ಕೆ ಉಪ್ಪು ಮತ್ತು ಬೆಲ್ಲ ಸೇರಿಸಿ ಕಿವುಚಿಕೊಳ್ಳಬೇಕು.
(ಸ್ವಲ್ಪ ನೀರನ್ನು ಸೇರಿಸಬಹುದು)
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಣಮೆಣಸಿನಕಾಯಿ ಮತ್ತು ಸಾಸಿವೆ ಕಾಳು ಹಾಕಬೇಕು.
ಸಾಸಿವೆ ಹಿಡಿದ ನಂತರ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಹುರಿಯಬೇಕು. ಸ್ವಲ್ಪ ತಣಿಯಲು ಬಿಡಬೇಕು.
ನಂತರ ಮೊದಲು ಸಿದ್ಧಪಡಿಸಿದ ಮಿಶ್ರಣಕ್ಕೆ ಒಗ್ಗರಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.

(ಉಪ್ಪು ಅಥವಾ ಬೆಲ್ಲ ಇಲ್ಲವೇ ನೀರು ಬೇಕಾದಲ್ಲಿ ಸೇರಿಸಬಹುದು)

ಸಾಂಬಾರ ಸೊಪ್ಪಿನ (ದೊಡ್ಡ ಪತ್ರೆ ಸೊಪ್ಪು) ತಂಬುಳಿ(Maxican mint)


ಈ ಸೊಪ್ಪು ನೆಗಡಿಯಂತಹ ಸಮಸ್ಯೆಗೆ ರಾಮಬಾಣ. ಹಾಗೆಯೇ ಆಮ್ಲೀಯತೆ ಅಥವಾ ಪಿತ್ತ ಹೆಚ್ಚಾದಾಗ ಇದನ್ನು ಮಜ್ಜಿಗೆಯ ಜೊತೆಗೆ ರುಬ್ಬಿಕೊಂಡು ಕಡಿದರೆ ನಿವಾರಣೆಯಾಗುತ್ತದೆ.

ಬೇಕಾಗುವ ಸಾಮಗ್ರಿ :
ಸಾಂಬಾರ ಸೊಪಸೊಪ್ಪು - 10 ರಿಂದ 15
ಕಾಳು ಮೆಣಸು - 8 ರಿಂದ 10
ಸೂಜಿ ಮೆಣಸು - 2
(ಬೇಕಾದರೆ ಮಾತ್ರ ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿತುರಿ - 1/2 ಕಪ್
ಮಜ್ಜಿಗೆ - 1 ಕಪ್
ನೀರು - ಬೇಕಾದಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
🍀 ಸೊಪ್ಪನ್ನು ತೊಳೆದು ಕೊಬ್ಬರಿ ಎಣ್ಣೆಯಲ್ಲಿ ಕಾಳು ಮೆಣಸಿನ ಜೊತೆಗೆ ಹುರಿಯಬೇಕು.
🍀 ಇದಕ್ಕೆ ಕಾಯಿತುರಿ ಮತ್ತು ಸೂಜಿ ಮೆಣಸು ಸೇರಿಸಿ ನಯವಾಗಿ ರುಬ್ಬಿಕೊಳ್ಳಬೇಕು.
🍀 ರುಬ್ಬಿದ ಮಿಶ್ರಣಕ್ಕೆ ಉಪ್ಪು, ಮಜ್ಜಿಗೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಬೇಕು. ಈಗ ಅನ್ನದ ಜೊತೆಗೆ ತಂಬುಳಿ ಸಿದ್ಧವಾಯಿತು
🍀 ತೆಳವಾಗಿಯೇ ಇದ್ದರೆ ಒಳ್ಳೆಯದು.

ವೇದಾವತಿ ಭಟ್ಟ
ಮುಂಬೈ 

ಎಳ್ಳು ಮತ್ತು ಅಗಸೆ ಬೀಜದ ಉಂಡೆ

ಎಳ್ಳು ಮತ್ತು ಅಗಸೆ ಬೀಜದ ಉಂಡೆ

ಬೇಕಾಗುವ ಸಾಮಗ್ರಿ :
ಎಳ್ಳು (ಬಿಳಿಯದು) - 1 ಕಪ್
ಅಗಸೆ ಬೀಜ - 1/2 ಕಪ್
ಬೆಲ್ಲ - 1 ಕಪ್
ಗೋಡಂಬಿ ಮತ್ತು ಬಾದಾಮಿ - ಸ್ವಲ್ಪ

ಮಾಡುವ ವಿಧಾನ :
ಎಳ್ಳನ್ನು ಮತ್ತು ಅಗಸೆ ಬೀಜವನ್ನು ಬೇರೆ ಬೇರೆಯಾಗಿ ಹುರಿದು ಕೊಳ್ಳಬೇಕು. ತಣಿಯಲು ಬಿಡಬೇಕು.
ನಂತರ ಬೆಲ್ಲಕ್ಕೆ ಎರಡು ಚಮಚ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಬೆಲ್ಲ ಕರಗುತ್ತದೆ. ಉಂಡೆ ಕಟ್ಟುವ ಹದಕ್ಕೆ ಪಾಕ ತರಿಸಿಕೊಳ್ಳಬೇಕು.
ಹುರಿದ ಎಳ್ಳು ಮತ್ತು ಅಗಸೆ ಬೀಜ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಸೇರಿಸಿ ಕೈಯಾಡಿಸಿ ಗ್ಯಾಸ್ ಆರಿಸಬೇಕು.
ಸ್ವಲ್ಪ ತಣ್ಣಗಾದ ನಂತರ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಬೇಕು.

ದಿನವೂ ಒಂದು ಉಂಡೆ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ಅಗಸೆ ಬೀಜದ ನಿಯಮಿತವಾದ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ವೇದಾವತಿ ಭಟ್ಟ
ಮುಂಬೈ 

ಬುಧವಾರ, ಜೂನ್ 30, 2021

ಸಬ್ಬಸಿಕೆ ಸೊಪ್ಪಿನ ಪಲ್ಯ





ಬೇಕಾಗುವ ಸಾಮಗ್ರಿ :
ಸಬ್ಬಸಿಕೆ ಸೊಪ್ಪು - 1 ಕಟ್ಟು
ಹೆಸರು ಬೇಳೆ - 1/4 ಕಪ್
ಮಸೂರ ಬೇಳೆ - 1/4 ಕಪ್
ಮೊಳಕೆ ಹೆಸರು ಕಾಳು - 1/4 ಕಪ್
ಕಾಯಿತುರಿ - 1/4 ಕಪ್
ಹಸಿಮೆಣಸಿನಕಾಯಿ - 1
ಎಣ್ಣೆ - 2 ಚಮಚ
ಸಾಸಿವೆ ಕಾಳು - 1/2 ಚಮಚ
ಅರಿಶಿಣ - 1 ಚಿಟಿಕೆ
ಜೀರಿಗೆ - 1 ಚಮಚ
ಹಿಂಗು - 1 ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಹುಳಿಪುಡಿ - 1/2 ಚಮಚc
(ಹುಳಿಗೆ ಹುಣಸೇಹಣ್ಣಿನ ರಸ ಬಳಸಬಹುದು)

ಮಾಡುವ ವಿಧಾನ :
ಮೊದಲು ಮೊಳಕೆ ಹೆಸರು ಕಾಳು ಸಿದ್ಧವಾಗಿಟ್ಟುಕೊಳ್ಳಬೇಕು.
ಹೆಸರು ಮತ್ತು ಮಸೂರ ಬೇಳೆಗಳನ್ನು ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಡಬೇಕು.
ಸಬ್ಬಸಿಕೆ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ ಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅರಿಶಿಣ ಹಾಕಿ ಸಾಸಿವೆ ಕಾಳು ಸಿಡಿಸಿ ಹಸಿಮೆಣಸಿನಕಾಯಿ ಹಾಕಬೇಕು.
ನಂತರ ನೆನೆಸಿದ ಕಾಳು ಮತ್ತು ಬೇಳೆ ಸೇರಿಸಿ ಸ್ವಲ್ಪ ನೀರು ಹಾಕಿ ಉಪ್ಪು ಮತ್ತು ಹುಳಿಪುಡಿ ಸೇರಿಸಬೇಕು.
ಕಾಯಿತುರಿಯನ್ನು ಸೇರಿಸಿ ಬೇಯಿಸಬೇಕು.
ಕೊನೆಯಲ್ಲಿ ಸಬ್ಬಸಿಕೆ ಸೊಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು.
ಸೊಪ್ಪು ಬೆಂದ ನಂತರ ಸ್ಟೋವ್ ಆಫ್ ಮಾಡಬೇಕು. ಪಲ್ಯ ಸಿದ್ಧವಾಯಿತು.


ಬುಧವಾರ, ಜೂನ್ 23, 2021

ಎಲವರಿಗೆ ಕಟ್ನೆ

ರೆಸಿಪಿ - 1
ಎಲವರಿಗೆ ಕಟ್ನೆ
ಸಾಂಪ್ರದಾಯಿಕ ಅಡುಗೆ
ಇದು ಮಲೆನಾಡಿನ ಹವ್ಯಕರ ಸಾಂಪ್ರದಾಯಿಕ ಅಡುಗೆ. ಹೆಚ್ಚಾಗಿ ಮಳೆಗಾಲದಲ್ಲಿ ಇದನ್ನು ಮಾಡುತ್ತಾರೆ. ಮಳೆಯಲ್ಲಿ ನೆನೆದಾಗ ಆಗುವ ಶೀತ-ಕೆಮ್ಮಿಗೂ ಇದು ಔಷಧ. ಅಲ್ಲದೇ ಬಿಸಿಯಾದ, ರುಚಿಯಾದ ಈ ಕಟ್ನೆ ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್. ಮೇಲಿನಿಂದ ಸ್ವಲ್ಪ ತುಪ್ಪ ಹಾಕಿಕೊಂಡು ಊಟ ಮಾಡಿದರೆ ಅದರ ರುಚಿಯೇ ಬೇರೆ.

ಬೇಕಾಗುವ ಸಾಮಗ್ರಿ :
ಎಲವರಿಗೆ ಸೊಪ್ಪು - 1 ಕಟ್ಟು
ಕಾಯಿ ತುರಿ - 1 ಕಪ್
ಜೀರಿಗೆ - 1 ಟೀ ಚಮಚ
ಕಾಳು ಮೆಣಸು - 1/2 ಚಮಚ
ಸೂಜಿ ಮೆಣಸು - 4 ರಿಂದ 5
ಉಪ್ಪು - ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ಸ್ವಲ್ಪ
ಬೆಳ್ಳುಳ್ಳಿ - 7 ರಿಂದ 8 ಎಸಳು
ಸಾಸಿವೆ ಕಾಳು - 1 ಚಮಚ
ಕೊಬ್ಬರಿ ಎಣ್ಣೆ - 4 ರಿಂದ 5 ಚಮಚ

ಮಾಡುವ ವಿಧಾನ :
ಮೊದಲು ಎಲವರಿಗೆ ಸೊಪ್ಪನ್ನು ಬಿಡಿಸಿ ತೊಳೆದುಕೊಳ್ಳಬೇಕು.
2 ಚಮಚ ಎಣ್ಣೆ ಹಾಕಿ ಸೊಪ್ಪನ್ನು ಹುರಿಯಬೇಕು. ಸ್ವಲ್ಪ ಹುರಿದ ಮೇಲೆ ಕಾಳು ಮೆಣಸನ್ನು ಸೇರಿಸಬೇಕು.
ಕೊನೆಯಲ್ಲಿ ಜೀರಿಗೆ ಸೇರಿಸಿ ಕೈಯಾಡಿಸಿ ಕೆಳಗಿಳಿಸಬೇಕು.
ಕಾಯಿತುರಿಯ ಜೊತೆಗೆ ಹುರಿದ ಸೊಪ್ಪು, ಹುಣಸೆ ಹಣ್ಣು ಹಾಗೂ ಸೂಜಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆಕಾಳು ಹಾಕಿ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಹಾಕಬೇಕು.

ಭಾನುವಾರ, ಜೂನ್ 20, 2021

ಬೀಟ್ರೂಟ್ ಚಟ್ನಿ

 
ಬೇಕಾಗುವ ಸಾಮಗ್ರಿ :
ಬೀಟ್ರೂಟ್ - 1
ಕಾಯಿತುರಿ - 1/2 ಕಪ್
ಜೀರಿಗೆ - 1/2 ಚಮಚ
ಉದ್ದಿನಬೇಳೆ - 1 ಚಮಚ
ಒಣಮೆಣಸಿನಕಾಯಿ - 2 ರಿಂದ 3
ಹಸಿಮೆಣಸಿನಕಾಯಿ - 1 (ಬೇಕಾದರೆ)
ಬೆಳ್ಳುಳ್ಳಿ - 4 ಎಸಳು
ಸಾಸಿವೆ - 1 ಚಮಚ
ಎಣ್ಣೆ - 2 ಚಮಚ
ಹುಣಸೆ ಹಣ್ಣು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವಿನ ಎಲೆ - 4 ರಿಂದ 6

ಮಾಡುವ ವಿಧಾನ :
ಬೀಟ್ರೂಟ್ ಅನ್ನು ತುರಿದು ಬಾಣಲೆಯಲ್ಲಿ ಎಣ್ಣೆ ಹಾಕಿ ಸರಿಯಾಗಿ ಹುರಿದುಕೊಳ್ಳಬೇಕು.
ಒಣಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು ಜೀರಿಗೆಯನ್ನು ಡ್ರೈ ರೋಸ್ಟ್ ಮಾಡಿಕೊಳ್ಳಬೇಕು. ಬೇಕಾದಲ್ಲಿ ಹಸಿಮೆಣಸಿನಕಾಯಿ ಸೇರಿಸಬಹುದು.
ಕಾಯಿತುರಿ, ಹುರಿದ ಬೀಟ್ರೂಟ್, ಬೆಳ್ಳುಳ್ಳಿ, ಹುಣಸೆ ಹಣ್ಣು ಮತ್ತು ಡ್ರೈ ರೋಸ್ಟ್ ಮಾಡಿದ ಎಲ್ಲವನ್ನು ಸೇರಿಸಿ ರುಬ್ಬಬೇಕು.
ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಮತ್ತು ಕರಿ ಬೇವಿನ ಎಲೆಯಿಂದ ಒಗ್ಗರಣೆ ಹಾಕಬೇಕು.

ಬಾಳೆ ಹಣ್ಣಿನ ಬನ್ಸ್

ಬಾಳೆ ಹಣ್ಣಿನ ಬನ್ಸ್

ಬೇಕಾಗುವ ಸಾಮಗ್ರಿ :
ಗೋಧಿ ಹಿಟ್ಟು - ಬಾಳೆ ಹಣ್ಣಿನ ರಸ ಹಿಡಿಯುವಷ್ಟು
ಬಾಳೆಹಣ್ಣು - 4
ಸಕ್ಕರೆ - 4 ರಿಂದ 5 ಚಮಚ
ಜೀರಿಗೆ - 1 ಚಮಚ
ಅಡಿಗೆ ಸೋಡಾ - 1 ಚಿಟಿಕೆ
ಮೊಸರು - 2 ಸೌಟು ( ಹುಳಿ ಮೊಸರು ಉತ್ತಮ)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ :

🍌ಬಾಳೆ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರ್ ನಲ್ಲಿ ರುಬ್ಬಿಕೊಳ್ಳಬೇಕು.
🍌ಇದಕ್ಕೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಿಸಬೇಕು.
🍌ಈ ಮಿಶ್ರಣಕ್ಕೆ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿಗಿಂತ ಮೆದುವಾಗಿರಲಿ.
🍌ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್ ನ ಮೇಲೆ ಕೈಯಿಂದ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಬೇಕು.
🍌ಬಾಜಿ / ಸಾಂಬಾರು / ಕಾಯಿಚಟ್ನಿಯ ಜೊತೆಗೆ ಸವಿಯಿರಿ.

ಸೋಮವಾರ, ಜೂನ್ 14, 2021

ಮಾವಿನಕಾಯಿ ಗೊಜ್ಜು (ಮಂದನ ಗೊಜ್ಜು)

ಮಾವಿನಕಾಯಿ ಗೊಜ್ಜು (ಮಂದನ ಗೊಜ್ಜು)

(ಇದು ಮಲೆನಾಡಿನ ಭಾಗವಾದ ಸಾಗರದ ಹವ್ಯಕರ ಸಾಂಪ್ರದಾಯಿಕ ಅಡಿಗೆ)

ಬೇಕಾಗುವ ಸಾಮಗ್ರಿ :
ಮಾವಿನಕಾಯಿ - 1
ಕಾಯಿತುರಿ - 1/2 ಕಪ್
ಮೆಂತ್ಯ - 1/2 ಚಮಚ
ಜೀರಿಗೆ - 1 ಚಮಚ
ಒಣಮೆಣಸಿನಕಾಯಿ - 1 ರಿಂದ 2
ಸೂಜಿಮೆಣಸು/ಹಸಿಮೆಣಸಿನಕಾಯಿ - 3 ರಿಂದ 4
ಉಪ್ಪು - ರುಚಿಗೆ
ಬೆಲ್ಲ - 1 ಸೌಟು
ಬೆಳ್ಳುಳ್ಳಿ - 7/8 ಎಸಳು
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ

ಮಾಡುವ ವಿಧಾನ
ಮಾವಿನಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಮೆಂತ್ಯ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು. ನಂತರ ಒಣಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಬೇಕು.
ಮಿಕ್ಸಿ ಜಾರಿಗೆ ಕಾಯಿತುರಿ, ಹೆಚ್ಚಿದ ಮಾವಿನಕಾಯಿ ಮತ್ತು ಹುರಿದ ಪದಾರ್ಥ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕುದಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಬೇಕು.
ಹುಳಿಸಿಹಿಯಾಗಿ ಅನ್ನದ ಜೊತೆಗೆ ಚೆನ್ನಾಗಿರುತ್ತದೆ.

ಚೆನ್ನಾಗಿ ಕುದಿಸಿದರೆ ವಾರದವರೆಗೂ ಇರುತ್ತದೆ.

ಶುಕ್ರವಾರ, ಜೂನ್ 4, 2021

ಮಾವಿನ ಕಾಯಿ ಬೀಸಪ್ಪೆಹುಳಿ



ಬೇಕಾಗುವ ಸಾಮಗ್ರಿ : 

ಮಾವಿನ ಕಾಯಿ - 1 (ದೊಡ್ಡದಾದರೆ ಅರ್ಧ)
ಬೆಲ್ಲ - 1 ಸೌಟು (ಸಿಹಿಗೆ ತಕ್ಕಂತೆ ಸ್ವಲ್ಪ ಹೆಚ್ಚು ಕಡಿಮೆ)
ಎಣ್ಣೆ - 2 ಚಮಚ
ಸಾಸಿವೆ ಕಾಳು - 2 ಚಮಚ
ಒಣ ಮೆಣಸಿನ ಕಾಯಿ - 3 ರಿಂದ 4
ಬೆಳ್ಳುಳ್ಳಿ - 8 ರಿಂದ 10 ಎಸಳು
ಉಪ್ಪು - ರುಚಿಗೆ ತಕ್ಕಷ್ಟು 

ಮಾಡುವ ವಿಧಾನ : 

ಮೊದಲು ಮಾವಿನಕಾಯಿ ತೊಳೆದು, ಕತ್ತರಿಸಿ ನೀರು ಹಾಕಿ ಬೇಯಿಸಿಕೊಳ್ಳಬೇಕು. ಬೇಯಿಸಿದ ನೀರಿನ್ನು ಚಲ್ಲಿ ತಣಿಯಲು ಬಿಡಬೇಕು.

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಣ ಮೆಣಸಿನಕಾಯಿ ಮತ್ತು 1/2 ಚಮಚ ಸಾಸಿವೆ ಕಾಳು ಹಾಕಿ ಹುರಿದುಕೊಳ್ಳಬೇಕು.

ನಂತರ ಈ ಹುರಿದ ಮಿಶ್ರಣ, ಬೇಯಿಸಿದ ಮಾವಿನಕಾಯಿ ಮತ್ತು ಎರಡು ಬೆಳ್ಳುಳ್ಳಿ ಎಸಳು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು ಸೇರಿಸಬೇಕು.

ಸಾಸಿವೆ ಕಾಳು, ಬೆಳ್ಳುಳ್ಳಿಯ ಒಗ್ಗರಣೆ ಹಾಕಿದರೆ ಮಾವಿನ ಕಾಯಿ ಬೀಸಪ್ಪೆಹುಳಿ ರೆಡಿ.





ಶನಿವಾರ, ಮೇ 15, 2021

ದಿಢೀರ್ ಇಡ್ಲಿ


ಬೇಕಾಗುವ ಸಾಮಗ್ರಿ :
ದಪ್ಪ ಅವಲಕ್ಕಿ - 1 ಕಪ್
ರವಾ - 2 ಕಪ್
ಮೊಸರು - 1 ಕಪ್
ಇನೋ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಚಮಚ

ಮಾಡುವ ವಿಧಾನ :
ಅವಲಕ್ಕಿಯನ್ನು 20 ನಿಮಿಷ ನೀರಿನಲ್ಲಿ ನೆನೆಸಬೇಕು.
ರವೆಯನ್ನು ತೊಳೆದು ಮೊಸರು ಮತ್ತು ಉಪ್ಪು ಸೇರಿಸಿ ಇಡಬೇಕು.
20 ನಿಮಿಷದ ನಂತರ ಅವಲಕ್ಕಿಯನ್ನು ನೀರಿಲ್ಲದಂತೆ ಹಿಂಡಿ, ನೀರು ಸೇರಿಸದೇ ರುಬ್ಬಿ ರವೆಯ ಮಿಶ್ರಣಕ್ಕೆ ಸೇರಿಸಬೇಕು.
ಸರಿಯಾಗಿ ಈ ಮಿಶ್ರಣವನ್ನು ಕದಡಿಕೊಳ್ಳಬೇಕು. ಗಟ್ಟಿಯಾಗಿಯೇ ಇರಬೇಕು.
ಇನೋ ಮತ್ತು ಎಣ್ಣೆಯನ್ನು ಸೇರಿಸಿ ಕೈಯಾಡಿಸಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಹಾಕಿ 15 ನಿಮಿಷ ಬೇಯಿಸಿದರೆ ದಿಢೀರ್ ಇಡ್ಲಿ ರೆಡಿ.

ಶುಕ್ರವಾರ, ಮೇ 14, 2021

ಪಲಾವ್



ಬೇಕಾಗುವ ಸಾಮಗ್ರಿ :
ತುಪ್ಪ - 2 ಚಮಚ
ಎಣ್ಣೆ - 2 ಚಮಚ
ಬಾಸ್ಮತಿ ಅಕ್ಕಿ - 2 ಲೋಟ
ನೀರು - 4 ಲೋಟ
ಟೊಮಾಟೊ - 1
ಕ್ಯಾರೆಟ್ - 1/2 ಕಪ್
ಬೀನ್ಸ್ - 1/2 ಕಪ್
ಬಟಾಟೆ - 1/2 ಕಪ್
ಈರುಳ್ಳಿ - 1
ಬೆಳ್ಳುಳ್ಳಿ - 7/8 ಎಸಳು
ಶುಂಠಿ - 1/2 ಇಂಚು
ಚಕ್ಕೆ - ಚೂರು
ಲವಂಗ - 1
ಪಲಾವ್ ಎಲೆ - 1/2
ಜೀರಿಗೆ - 1/2 ಚಮಚ
ಕೊತ್ತಂಬರಿ - 1/4 ಚಮಚ
ಗಸಗಸೆ - 1/2 ಚಮಚ
ಉಪ್ಪು - ರುಚಿಗೆ

ಮಾಡುವ ವಿಧಾನ :

ಮೊದಲು ಕುಕ್ಕರಿಗೆ ತುಪ್ಪ ಮತ್ತು ಎಣ್ಣೆ ಹಾಕಿ ಪಲಾವ್ ಎಲೆ ಹಾಕಿ ಬಿಸಿ ಮಾಡಬೇಕು.
ಟೊಮಾಟೊ, ಈರುಳ್ಳಿ, ಬೆಳ್ಳುಳ್ಳಿ, ಗಸಗಸೆ, ಜೀರಿಗೆ, ಕೊತ್ತಂಬರಿ, ಚಕ್ಕೆ, ಲವಂಗ, ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು ಎಲ್ಲವನ್ನೂ ರುಬ್ಬಿಕೊಳ್ಳಬೇಕು.
ನಂತರ ತರಕಾರಿ ಹೋಳುಗಳನ್ನು ಸೇರಿಸಿ ಕೈಯಾಡಿಸಿ, ಅಕ್ಕಿ ಹಾಕಬೇಕು.
ಉಪ್ಪು ಮತ್ತು ನೀರು ಸೇರಿಸಿ ರುಬ್ಬಿದ ಮಿಶ್ರಣ ಸೇರಿಸಿ ಮುಚ್ಚಳ ಹಾಕಿ ಮೂರು ಸೀಟಿ ಹೊಡೆಸಬೇಕು.

ಘೀರೈಸ್



ಬೇಕಾಗುವ ಸಾಮಗ್ರಿ :
ಗೋಡಂಬಿ - 8/10
ದ್ರಾಕ್ಷಿ - 10/15
ಅಕ್ಕಿ - 1 ಕಪ್ (ನೆನೆಸಿದ ಬಾಸ್ಮತಿ ಅಕ್ಕಿ)
ನೀರು - 1.5 ಕಪ್
ತುಪ್ಪ - 4 ಚಮಚ
ಲವಂಗ - 1
ಚಕ್ಕೆ - ಚೂರು
ಏಲಕ್ಕಿ - 1
ಉಪ್ಪು - ರುಚಿಗೆ ತಕ್ಕಷ್ಟು
ಈರುಳ್ಳಿ - 1 (ಸಣ್ಣಗೆ ಹೆಚ್ಚಿದ್ದು)
ಪಲಾವ್ ಎಲೆ - 1/2 ಇಂಚು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಹಸಿಮೆಣಸಿನಕಾಯಿ - 1

ಮಾಡುವ ವಿಧಾನ :

ಮೊದಲು ಬಾಣಲೆಯಲ್ಲಿ 1 ಚಮಚ ಹಾಕಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿದಿಟ್ಟುಕೊಳ್ಳಬೇಕು.
ಕುಕ್ಕರಿನಲ್ಲಿ ಮೂರು ಚಮಚ ತುಪ್ಪ ಹಾಕಿ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ ಹಾಕಿ ಕೈಯಾಡಿಸಬೇಕು.
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಕೈಯಾಡಿಸಬೇಕು.
ನೆನೆಸಿದ ಅಕ್ಕಿ, ನೀರು ಮತ್ತು ಉಪ್ಪು ಸೇರಿಸಿ ಎರಡು ವಿಸಿಲ್ ಹೊಡೆಸಬೇಕು.
ನಂತರ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಸೇರಿಸಿದರೆ ಘೀರೈಸ್ ಸವಿಯಲು ಸಿದ್ಧ.

ಪುಂಡಿಉಂಡೆ

#ಪುಂಡಿ ಉಂಡೆ # ನುಚ್ಚಿನ ಕಡಬು
ಕರಾವಳಿಯ ವಿಶೇಷತೆ
( ಅಕ್ಕಿ ರವೆಯಿಂದ ಮಾಡಿದ್ದು )

ಅಕ್ಕಿರವೆ ಪುಂಡಿ :

ಬೇಕಾಗುವ ಸಾಮಗ್ರಿಗಳು :
ಇಡ್ಲಿರವೆ - ೨ ಲೋಟ
ನೀರು - ೪.೫ ಲೋಟ
ಒಗ್ಗರಣೆಗೆ - ತೆಂಗಿನ ಎಣ್ಣೆ ೨ ಚಮಚ
ಸಾಸಿವೆ - ೧ ಚಮಚ
ಜೀರಿಗೆ - ೧ ಚಮಚ
ಕಡ್ಲೆಬೇಳೆ - ೧ಚಮಚ
ಕರಿಬೇವಿನ ಎಲೆಗಳು - ೮/೧೦
ದೊಡ್ಡದಾದ ಈರುಳ್ಳಿ - ೧ ಸಣ್ಣಗೆ ಹೆಚ್ಚಿದ್ದು.
ತೆಂಗಿನ ತುರಿ - ಸ್ವಲ್ಪ
ಉಪ್ಪು - ರುಚಿಗೆ

ಮಾಡುವ ವಿಧಾನ :
ಬಾಣಲಿಗೆ ತೆಂಗಿನ ಎಣ್ಣೆ ಹಾಕಿ ಒಗ್ಗರಣೆ ಕೊಡಿ. ನಂತರ ಇಡ್ಲಿರವೆಯನ್ನು ಹಾಕಿ ಚೆನ್ನಾಗಿ ಕಲಸಿ. ಅಳತೆಯ ನೀರನ್ನು ಹಾಕಿ ಮಿಕ್ಸ್ ಮಾಡಿರಿ. ತೆಂಗಿನ ತುರಿ ಹಾಕಿರಿ‌. ಗಟ್ಟಿಯಾಗುವ ತನಕ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಗೊಟಾಯಿಸಿರಿ.
ನಂತರ ಕೆಳಗಿಸಿ. ಸ್ವಲ್ಪ ಬಿಸಿಬಿಸಿ ಯಿರುವಾಗಲೇ ಎಲ್ಲ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿರಿ. ಅದನ್ನು ಇಡ್ಲಿ ಅಟ್ಟದಲ್ಲಿ ಇಟ್ಟು ಹದಿನೈದು ನಿಮಿಷ ಬೇಯಿಸಿರಿ. ಸಂಜೆಗೆ ಬಿಸಿಬಿಸಿಯಾದ ಕರಾವಳಿಯ ತಿಂಡಿ ಉಂಡೆ ( ಪುಂಡಿ ) ಸವಿಯಲು ಸಿದ್ದ.

ಶನಿವಾರ, ಮಾರ್ಚ್ 20, 2021

ಅಲಸಂದೆ ಮತ್ತು ಕುಂಬಳಕಾಯಿ ಪಲ್ಯ



ಬೇಕಾಗುವ ಸಾಮಗ್ರಿ :
ಅಲಸಂದೆ ಕಾಳು - 1 ಕಪ್
ಕರಿಕುಂಬಳ ಕಾಯಿ ಹೋಳು - 1/2 ಕಪ್
ಕಾಯಿತುರಿ - 1/2 ಕಪ್
ಟೊಮಾಟೊ - 1
ಬೆಳ್ಳುಳ್ಳಿ - 4/5
ಶುಂಠಿ - 1/2 ಇಂಚು
ಈರುಳ್ಳಿ - 1
ಕೊತ್ತಂಬರಿ ಸೊಪ್ಪು - ಸ್ವಲ್ಪ
ಗೋಡಂಬಿ - 2/4
ಜೀರಿಗೆ - 1/2 ಚಮಚ
ಕೊತ್ತಂಬರಿ ಬೀಜ - 1/2 ಚಮಚ
ಹಸಿ ಮೆಣಸಿನ ಕಾಯಿ - 1
ಸಾಸಿವೆ - 1/2 ಚಮಚ
ಎಣ್ಣೆ - 2 ಚಮಚ
ಬೆಲ್ಲ - 1 ಚಮಚ

ಮಾಡುವ ವಿಧಾನ :
ಮೊದಲು ಅಲಸಂದೆ ಕಾಳನ್ನು ತೊಳೆದು ಬೇಯಿಸಿಕೊಳ್ಳಬೇಕು.
ಕುಂಬಳಕಾಯಿ ಹೋಳನ್ನು ಸಿದ್ಧಪಡಿಸಿ ಇಟ್ಟು ಕೊಳ್ಳಬೇಕು.
ಕಾಯಿತುರಿ, ಟೊಮಾಟೊ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕೊತ್ತಂಬರಿ ಬೀಜ, ಹಸಿ ಮೆಣಸಿನ ಕಾಯಿ ಸೇರಿಸಬೇಕು.
ಗೋಡಂಬಿಯನ್ನು ಹುರಿದು ಸೇರಿಸಬೇಕು.
ಇದೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಇದಕ್ಕೆ ಬೇಯಿಸಿದ ಅಲಸಂದೆ ಕಾಳು ಮತ್ತು ಕುಂಬಳಕಾಯಿ ಹೋಳು ಸೇರಿಸಿ ಬೇಯಿಸಬೇಕು.
ನಂತರ ರುಬ್ಬಿದ ಮಿಶ್ರಣ ಸೇರಿಸಿ ಉಪ್ಪು ಮತ್ತು ಬೆಲ್ಲ ಸೇರಿಸಬೇಕು.
ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಬೇಯಿಸಬೇಕು.

ಬುಧವಾರ, ಮಾರ್ಚ್ 10, 2021

ಕುಲ್ಫೀ

ಕುಲ್ಫೀ

ಬೇಕಾಗುವ ಸಾಮಗ್ರಿ :

ಹಾಲು - 1/2 ಲೀಟರ್
ಕಸ್ಟರ್ಡ್ ಪೌಡರ್ - 2 ಚಮಚ
ಸಕ್ಕರೆ - 1/2 ಕಪ್
ನಟ್ಸ್ (ಗೋಡಂಬಿ,ಪಿಸ್ತಾ) - ಸ್ವಲ್ಪ

ಮಾಡುವ ವಿಧಾನ :
ಹಾಲನ್ನು ದಪ್ಪ ತಳದ ಪಾತ್ರೆಗೆ ಹಾಕಿ ಚೆನ್ನಾಗಿ ಕಾಯಿಸಬೇಕು.
ತಳ ಹಿಡಿಯದಂತೆ ಹಾಗೂ ಕೆನೆ ಗಟ್ಟದಂತೆ ಕೈಯಾಡಿಸುತ್ತಿರಬೇಕು.
ನಂತರ ಸಕ್ಕರೆ ಸೇರಿಸಬೇಕು.
ಕಸ್ಟರ್ಡ್ ಪೌಡರ್ ಗೆ ಹಾಲು ಸೇರಿಸಿ ಗಂಟಿಲ್ಲದಂತೆ ಕರಡಿ ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಬೇಕು.
ಮತ್ತ 10 ನಿಮಿಷ ಕುದಿಸಿದಾಗ ಹಾಲು ದಪ್ಪವಾಗುತ್ತದೆ.
ಬಾದಾಮಿ, ಗೋಡಂಬಿ ಚೂರುಗಳನ್ನು ಸೇರಿಸಬೇಕು.
ಒಲೆಯ ಮೇಲಿಂದ ಇಳಿಸಿ, ತಣ್ಣಗಾದ ನಂತರ ಕುಲ್ಫೀ ಮೌಲ್ಡ್ ಗೆ ಹಾಕಿ ಡೀಪ್ ಫ್ರೀಜರ್ ನಲ್ಲಿ 8 ರಿಂದ 10 ಗಂಟೆ ಬಿಡಬೇಕು.

ಮಾವಿನಕಾಯಿ ಬೂತಗೊಜ್ಜು



ಬೇಕಾಗುವ ಸಾಮಗ್ರಿ :
ಮಾವಿನಕಾಯಿ - 1 (ಮಧ್ಯಮ ಗಾತ್ರದ್ದು)
ಕಾಯಿತುರಿ - 1 ಕಪ್
ಬೆಳ್ಳುಳ್ಳಿ - 6/8
ಉದ್ದಿನ ಬೇಳೆ - 1 ಚಮಚ
ಒಣಮೆಣಸಿನಕಾಯಿ -1
ಸೂಜಿ ಮೆಣಸು - 5/6
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ
ಜೀರಿಗೆ - 1/2 ಚಮಚ
ಸಕ್ಕರೆ - 1/4 ಚಮಚ

ಮಾಡುವ ವಿಧಾನ :
ಮಾವಿನ ಕಾಯಿಯನ್ನು ಬೇಯಿಸಿ ತಣ್ಣಗಾಗಲು ಬಿಡಬೇಕು.
ಬಾಣಲೆಯಲ್ಲಿ ಉದ್ದಿನ ಬೇಳೆ, ಒಣಮೆಣಸನ್ನು ಹುರಿದು ನಂತರ ಜೀರಿಗೆ ಸೇರಿಸಿ ಮತ್ತೆ ಹುರಿಯಬೇಕು. (ಎಣ್ಣೆ ಹಾಕಬಾರದು)
ನಂತರ ಕಾಯಿತುರಿ, ಎರಡು ಬೆಳ್ಳುಳ್ಳಿ ಎಸಳು, ಬೇಯಿಸಿದ ಮಾವಿನಕಾಯಿ ಕಿವುಚಿ ಹಾಕಿ ರುಬ್ಬಬೇಕು.
ಇದಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಬೇಕು.
ನಂತರ ಎಣ್ಣೆ, ಸಾಸಿವೆ ಕಾಳು ಮತ್ತು ಬೆಳ್ಳುಳ್ಳಿಯ ಒಗ್ಗರಣೆ ಕೊಡಬೇಕು.

ಗೋಳಿ ಸೊಪ್ಪಿನ ಹಿಂಡಿ

ಗೋಳಿ ಸೊಪ್ಪಿನ ಹಿಂಡಿ

ಬೇಕಾಗುವ ಸಾಮಗ್ರಿ :
ಗೋಳಿ ಸೊಪ್ಪು - 1 ಕಟ್ಟು
ಈರುಳ್ಳಿ - 1
ಕಾಯಿತುರಿ - 1/2 ಕಪ್
ಒಣಮೆಣಸಿನಕಾಯಿ - 2
ಹುಳಿಪುಡಿ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ
ಬೆಲ್ಲ - 1 ಚಮಚ

ಮಾಡುವ ವಿಧಾನ :
ಗೋಳಿ ಸೊಪ್ಪನ್ನು ಹೆಚ್ಚಿ ಉಪ್ಪು ಮತ್ತು ಹುಳಿಪುಡಿ ಹಾಕಿ ಬೇಯಿಸಿಕೊಳ್ಳಬೇಕು.
ನಂತರ ನೀರನ್ನು ಬಸಿದು ಹಿಂಡಿ ಇಟ್ಟುಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಒಣಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು. ಪಕ್ಕದಲ್ಲಿ ಇಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ, ಕಾಯಿತುರಿ ಸೇರಿಸಿ ಹುರಿಯಬೇಕು.
ನಂತರ ಸಿದ್ಧ ಪಡಿಸಿದ ಗೋಳಿ ಸೊಪ್ಪಿನ ಹೋಳಿಗೆ ಬೇಕಾದಷ್ಟು ಉಪ್ಪು, ಹುಳಿ, ಬೆಲ್ಲ ಮತ್ತು ಹುರಿದ ಒಣಮೆಣಸಿನಕಾಯಿಯನ್ನು ನುರಿದು ಸೇರಿಸಿ ಚೆನ್ನಾಗಿ ಕಲಸಬೇಕು.
ಒಲೆಯ ಮೇಲಿನ ಬಾಣಲೆಗೆ ಈ ಮಿಶ್ರಣವನ್ನು ಸೇರಿಸಿ ಕೈಯಾಡಿಸಬೇಕು.

ಭಾನುವಾರ, ಫೆಬ್ರವರಿ 28, 2021

ಟೊಮಾಟೊ ತಂಬ್ಳಿ

ಟೊಮಾಟೊ ತಂಬ್ಳಿ

ಬೇಕಾಗುವ ಸಾಮಗ್ರಿ :
ಟೊಮಾಟೊ - 1
ಕಾಯಿತುರಿ - 1/2 ಕಪ್
ಮಜ್ಜಿಗೆ - 1/2 ಕಪ್
ಜೀರಿಗೆ - 1 ಚಮಚ
ಕಾಳು ಮೆಣಸು - 7/8
ಕರಿಬೇವು - 3/4 ಎಲೆ
ಸಾಸಿವೆ - 1/2 ಚಮಚ
ಒಣಮೆಣಸಿನಕಾಯಿ - 1
ಎಣ್ಣೆ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಜೀರಿಗೆ ಮತ್ತು ಕಾಳು ಮೆಣಸನ್ನು ಹುರಿಯಬೇಕು.
ನಂತರ ಟೊಮಾಟೊವನ್ನು ಹೆಚ್ಚಿ ಮಾಡಿಸಿಕೊಳ್ಳಬೇಕು.
ಇದಕ್ಕೆ ಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಮಜ್ಜಿಗೆ ಸೇರಿಸಿ ಉಪ್ಪು ಬೇಕಾದಷ್ಟು ನೀರು ಸೇರಿಸಬೇಕು.
ನಂತರ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಕೈಯಾಡಿಸಿ ಜೀರಿಗೆ ಹಾಕಿ ಸಿದ್ಧ ಪಡಿಸಿದ ಮಿಶ್ರಣಕ್ಕೆ ಒಗ್ಗರಣೆ ಹಾಕಬೇಕು.
ಬೇಕಾದರೆ 1/2 ಚಮಚ ಸಕ್ಕರೆ ಸೇರಿಸಬೇಕು.

ಶುಕ್ರವಾರ, ಫೆಬ್ರವರಿ 19, 2021

ದಾಲ್

ದಾಲ್

ಬೇಕಾಗುವ ಸಾಮಗ್ರಿ :

ಮಸೂರ್ (ಕೆಂಪು ತೊಗರಿ) - 1/4 ಕಪ್
ಹೆಸರು ಬೇಳೆ - 1/4 ಕಪ್
ಅರಿಶಿಣ - 1 ಚಿಟಿಕೆ
ಬೆಳ್ಳುಳ್ಳಿ - 6/7 ಎಸಳು
ಈರುಳ್ಳಿ - 1
ಜೀರಿಗೆ ಪುಡಿ - 1/2 ಚಮಚ
ಧನಿಯಾ ಪುಡಿ - 1/2 ಚಮಚ
ಟೊಮಾಟೊ - 1
ಶುಂಠಿ - 1/2 ಇಂಚೂ
ಹಸಿಮೆಣಸಿನಕಾಯಿ - 1/2
ಒಣ ಮೆಣಸಿನ ಕಾಯಿ - 1
ಸಾಸಿವೆ - 1/2 ಚಮಚ
ಹಿಂಗು - 1/4 ಚಮಚ
ಚಕ್ಕೆ - ಚೂರು
ಪಲಾವ್ ಎಲೆ - 1/2 ಎಲೆ
ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ವಿಧಾನ :

ಎರಡು ವಿಧದ ಬೇಳೆಯನ್ನು ಬೇಯಿಸಿಟ್ಟುಕೊಳ್ಳಬೇಕು.
ಒಂದು ಕಡಾಯಿಗೆ ಎಣ್ಣೆ ಹಾಕಿ ಅರಿಶಿಣ, ಸಾಸಿವೆ ಸೇರಿಸಬೇಕು.
ಚಕ್ಕೆ, ಪಲಾವ್ ಎಲೆ,
ಒಣಮೆಣಸಿನಕಾಯಿ ಚೂರು, ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಬಾಡಿಸಬೇಕು.
ನಂತರ ಜಜ್ಜಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಕೈಯಾಡಿಸಬೇಕು.
ನಂತರ ಹೆಚ್ಚಿದ ಟೊಮಾಟೊ ಮತ್ತು ಈರುಳ್ಳಿ ಸೇರಿಸಬೇಕು.
ಧನಿಯಾ ಪುಡಿ, ಜೀರಿಗೆ ಪುಡಿ ಸೇರಿಸಬೇಕು.
ಬೇಕಾದಷ್ಟು ನೀರು, ಉಪ್ಪು, ಹಳಿಪುಡಿ, ಬೆಲ್ಲ ಸೇರಿಸಿ ಕುದಿಸಬೇಕು.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಬೇಕು.



ಗುರುವಾರ, ಫೆಬ್ರವರಿ 18, 2021

ಜೀರಾ ರೈಸ್

ಜೀರಾ ರೈಸ್

ಬೇಕಾಗುವ ಸಾಮಗ್ರಿ :
ಅಕ್ಕಿ - 1 ಕಪ್
ಏಲಕ್ಕಿ - 1
ಪಲಾವ್ ಎಲೆ - 1/2 ಎಲೆ
ಚಕ್ಕೆ - 1/2 ಇಂಚು
ಲವಂಗ - 1
ಜೀರಿಗೆ - 3 ಚಮಚ
ಹಸಿ ಮೆಣಸು - 1
ಗೋಡಂಬಿ - 6/7
ತುಪ್ಪ - 2 ಚಮಚ
ಎಣ್ಣೆ - 2 ಚಮಚ

ಮಾಡುವ ವಿಧಾನ :

ಕುಕ್ಕರ್ ಗೆ 1 ಚಮಚ ಎಣ್ಣೆ 1 ಚಮಚ ತುಪ್ಪ ಹಾಕಬೇಕು. ಇದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಕೈಯಾಡಿಸ ಬೇಕು. ಹಸಿ ಮೆಣಸು ಸಿಗಿದು ಹಾಕಬೇಕು. ನಂತರ ಜೀರಿಗೆ ಹಾಕಿ ಕೈಯಾಡಿಸಬೇಕು. ಅಕ್ಕಿ ಹಾಕಬೇಕು. ಎರಡು ಲೋಟ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ನಂತರ ಕುಕ್ಕರ್ ಮುಚ್ಚಳ ಹಾಕಿ ಎರಡು ಕೂಗು ಕೂಗಿಸಬೇಕು.
ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು ತುಪ್ಪದಲ್ಲಿ ಹುರಿದು ಹಾಕಬೇಕು.

ಸೋಮವಾರ, ಫೆಬ್ರವರಿ 1, 2021

ಬಾಳೆ ಕಾಯಿ ಬೂತಗೊಜ್ಜು

ಬೇಕಾಗುವ ಸಾಮಗ್ರಿ :
ಬಾಳೆಕಾಯಿ - 2
ಕಾಯಿತುರಿ - 1 ಹಿಡಿ
ಉದ್ದಿನಬೇಳೆ - 1 ಚಮಚ
ಜೀರಿಗೆ - 1 ಚಮಚ
ಎಣ್ಣೆ - 4 ಚಮಚ
ಸಾಸಿವೆ - 1 ಚಮಚ
ಒಣಮೆಣಸಿನಕಾಯಿ - 1
ಸೂಜಿಮೆಣಸು - 7/8
ಬೆಳ್ಳುಳ್ಳಿ - 7/8 ಎಸಳು
ಉಪ್ಪು ಮತ್ತು ಹುಳಿ - ರುಚಿಗೆ

ಮಾಡುವ ವಿಧಾನ :
🍀ಮೊದಲು ಬಾಳೆಕಾಯಿಯನ್ನು ತೊಳೆದು ಸಿಪ್ಪೆ ಸಮೇತ ಬೇಯಿಸಿಕೊಳ್ಳಬೇಕು.
🍀ನಂತರ ಉದ್ದಿನಬೇಳೆ, ಒಣಮೆಣಸಿನಕಾಯಿ, ಜೀರಿಗೆಯನ್ನು ಎಣ್ಣೆಯಲ್ಲಿ ಹುರಿದುಕೊಳ್ಳಬೇಕು.
ನಂತರ ಕಾಯಿತುರಿ, ಬೇಯಿಸಿದ ಬಾಳೆಕಾಯಿ, ಹುರಿದ ಪದಾರ್ಥ, ಸೂಜಿಮೆಣಸು ಹಾಗೂ ಎರಡು ಬೆಳ್ಳುಳ್ಳಿ ಎಸಳು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
🍀ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಳಿ ಸೇರಿಸಬೇಕು.
🍀ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಬೆಳ್ಳುಳ್ಳಿ ಜಜ್ಜಿ ಹಾಕಿ ಒಗ್ಗರಣೆ ಕೊಡಬೇಕು.

ಗುರುವಾರ, ಜನವರಿ 21, 2021

ದ್ರಾಕ್ಷಿ ಹಣ್ಣಿನ ಬೀಸಪ್ಪೆಹುಳಿ

ದ್ರಾಕ್ಷಿ ಹಣ್ಣಿನ ಬೀಸಪ್ಪೆಹುಳಿ

ಬೇಕಾಗುವ ಸಾಮಗ್ರಿ :

ದ್ರಾಕ್ಷಿ ಹಣ್ಣು - ಒಂದು ಚಿಕ್ಕ ಗೊಂಚಲು (25 ರಿಂದ 39)
ಹುಳಿ ಇರಬೇಕು
ಬೆಲ್ಲ - 1 ಸೌಟು (ಸಿಹಿಗೆ ತಕ್ಕಂತೆ ಸ್ವಲ್ಪ ಹೆಚ್ಚು ಕಡಿಮೆ)
ಎಣ್ಣೆ - 2 ಚಮಚ
ಸಾಸಿವೆ ಕಾಳು - 2 ಚಮಚ
ಒಣ ಮೆಣಸಿನ ಕಾಯಿ - 3 ರಿಂದ 4
ಬೆಳ್ಳುಳ್ಳಿ - 8 ರಿಂದ 10 ಎಸಳು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಮೊದಲು ದ್ರಾಕ್ಷಿಯನ್ನು ತೊಳೆದು, ಬೇಯಿಸಿಕೊಳ್ಳಬೇಕು. ಬೇಯಿಸಿದ ನೀರಿನ್ನು ಚಲ್ಲಿ ತಣಿಯಲು ಬಿಡಬೇಕು.

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಣ ಮೆಣಸಿನಕಾಯಿ ಮತ್ತು 1 ಚಮಚ ಸಾಸಿವೆ ಕಾಳು ಹಾಕಿ ಹುರಿದುಕೊಳ್ಳಬೇಕು.

ನಂತರ ಈ ಹುರಿದ ಮಿಶ್ರಣ, ಬೇಯಿಸಿದ ದ್ರಾಕ್ಷಿ ಹಣ್ಣು ಮತ್ತು ಎರಡು ಬೆಳ್ಳುಳ್ಳಿ ಎಸಳು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು ಸೇರಿಸಬೇಕು.

ಸಾಸಿವೆ ಕಾಳು, ಬೆಳ್ಳುಳ್ಳಿಯ ಒಗ್ಗರಣೆ ಹಾಕಿದರೆ ದ್ರಾಕ್ಷಿ ಹಣ್ಣಿನ ಬೀಸಪ್ಪೆಹುಳಿ ರೆಡಿ.