ಗುರುವಾರ, ಫೆಬ್ರವರಿ 16, 2023

ಮಟರ್ (ಹಸಿರು ಬಟಾಣಿ) ಪರೋಟಾ


ಬೇಕಾಗುವ ಸಾಮಗ್ರಿ : 
ಮಟರ್ - 1 ಕಪ್
ಬೆಳ್ಳುಳ್ಳಿ - 4/5 ಎಸಳು
ಈರುಳ್ಳಿ - 1 
ಅರಿಶಿಣ - 1/4 ಚಮಚ 
ಕೊತ್ತಂಬರಿ ಸೊಪ್ಪು - ಸ್ವಲ್ಪ 
ಕಡಲೆ ಹಿಟ್ಟು - 3 ದೊಡ್ಡ ಚಮಚ 
ಜೀರಿಗೆ - 1 ಚಮಚ 
ಎಣ್ಣೆ - 2 ಚಮಚ 
ಹಸಿ ಮೆಣಸಿನ ಕಾಯಿ - 2 
ಗರಂ ಮಸಾಲ - 1 ಚಮಚ 
ಗೋಧಿ ಹಿಟ್ಟು - 1 1/2 ಕಪ್ (ಸ್ವಲ್ಪ ಹೆಚ್ಚು ಕಡಿಮೆ ತೆಗೆದುಕೊಳ್ಳಬಹುದು)
ಎಣ್ಣೆ - 1 ಸೌಟು
ರವಾ - 2 ದೊಡ್ಡ ಚಮಚ 
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ರವಾ ಮತ್ತು ಗೋಧಿ ಹಿಟ್ಟನ್ನು ಉಪ್ಪು, ಎಣ್ಣೆ ಸೇರಿಸಿ ಕಲಸಬೇಕು.
ನಂತರ ಬೇಕಾದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಬಿಡಬೇಕು.
ಒಂದು ಬಾಣಲೆಯಲ್ಲಿ ಕಡಲೆ ಹಿಟ್ಟನ್ನುಎಣ್ಣೆ, ತುಪ್ಪ ಏನೂ ಹಾಕದೇ ಹುರಿದು ಕೊಳ್ಳಬೇಕು. 
ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಮಟರ್ ನ್ನು ಹಸಿಯಾಗಿಯೇ (ಬೇಯಿಸುವ ಅಗತ್ಯವಿಲ್ಲ) ಮಿಕ್ಸಿ ಜಾರ್ ಗೆ ಹಾಕಿ ನೀರು ಸೇರಿಸದೇ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. 
ಒಂದು ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಮೇಲೆ ಜೀರಿಗೆ ಹಾಕಿ ಕೈಯಾಡಿಸಿ ನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಹುರಿಯಬೇಕು.
ನಂತರ ಇದಕ್ಕೆ ರುಬ್ಬಿದ ಮಟರ್ ಮತ್ತು ಹುರಿದ ಕಡಲೆ ಹಿಟ್ಟು ಸೇರಿಸಬೇಕು.
ಅರಿಶಿಣ, ಗರಂ ಮಸಾಲ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಒಲೆ ಆರಿಸಿ ತಣ್ಣಗಾಗಲು ಬಿಡಬೇಕು. ನಂತರ ಸಣ್ಣ ಸಣ್ಣ ಉಂಡೆ ಮಾಡಬೇಕು.
ಇದನ್ನು ಮೊದಲೇ ಕಲಸಿದ ಗೋಧಿ ಹಿಟ್ಟಿನ ಉಂಡೆಯ ಒಳಗೆ ಸೇರಿಸಿ ಲಟ್ಟಿಸಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಬೇಕು.

(ಹಸಿರು ಚಟ್ನಿ, ಕೆಂಪು ಚಟ್ನಿ ಅಥವಾ ಸಾಸ್ ಇದರ ಜೊತೆಗೆ ಒಳ್ಳೆಯ ಕಾಂಬಿನೇಷನ್)

ವೇದಾವತಿ ಭಟ್ಟ 
ಮುಂಬೈ

ಬುಧವಾರ, ಫೆಬ್ರವರಿ 15, 2023

ಬದನೆಕಾಯಿ ಬಜ್ಜಿ (ಬದನೆ ಕಾಯಿ ಮೊಸರು ಬಜ್ಜಿ/ರಾಯ್ತ)


(ಹವ್ಯಕರ ಸಾಂಪ್ರದಾಯಿಕ ಅಡುಗೆ)

ಬೇಕಾಗುವ ಸಾಮಗ್ರಿ :
ಬದನೆಕಾಯಿ - 2 ರಿಂದ 3 (ಸಣ್ಣದು)
ಈರುಳ್ಳಿ - 1
ಒಣಮೆಣಸು - 2
ಕೊಬ್ಬರಿ ಎಣ್ಣೆ - 2 ಚಮಚ 
ಸಾಸಿವೆ - 1 ಚಮಚ 
ಕಾಯಿತುರಿ - 1/2 ಕಪ್
ಮೊಸರು - 2 ರಿಂದ 3 ಸೌಟು (1/2 ಕಪ್)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬದನೆಕಾಯಿಯನ್ನು ಗ್ಯಾಸ್ ಸ್ಟೋವ್ ನ ಮೇಲೆ ಇಟ್ಟು ಸುಡಬೇಕು.
ತಣ್ಣಗಾದ ನಂತರ ಸಿಪ್ಪೆ ಸುಲಿದು ಕತ್ತರಿಸಿಕೊಳ್ಳಬೇಕು. (ಸ್ಮಾಶ್ ಕೂಡ ಮಾಡಬಹುದು)
ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಬೇಕು.
ಕಾಯಿತುರಿ ನುಣ್ಣಗೆ ರುಬ್ಬಿ ಸೇರಿಸಬೇಕು. ಜಾಸ್ತಿ ನೀರು ಸೇರಿಸಬಾರದು. ಸ್ವಲ್ಪ ದಪ್ಪವಾಗಿಯೇ ಇರಲಿ. 
ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೊಸರು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಬೇಕು. 
ಇದಕ್ಕೆ ಸಾಸಿವೆ ಕಾಳು ಹಾಗೂ ಒಣ ಮೆಣಸಿನ ಒಗ್ಗರಣೆ ಕೊಬ್ಬರಿ ಎಣ್ಣೆಯಲ್ಲಿ ಕೊಡಬೇಕು.
ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್.

(ಬೇಕಾದರೆ ಕೊತ್ತಂಬರಿ ಸೊಪ್ಪು ಹೆಚ್ಚಿ ಸೇರಿಸಬಹುದು. ನಾನು ಹಾಕಿಲ್ಲ. ಸಾಂಪ್ರದಾಯಿಕ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸುವುದಿಲ್ಲ.) 

ವೇದಾವತಿ ಭಟ್ಟ 
ಮುಂಬೈ

ವೆಜ್ ಕಟ್ಲೆಟ್



ಬೇಕಾಗುವ ಸಾಮಗ್ರಿ :
ಹಸಿರು ಬಟಾಣಿ - 1 ಕಪ್
ಆಲೂಗಡ್ಡೆ - 2 (ದೊಡ್ಡದು)
ಕ್ಯಾರೆಟ್ - 2 ರಿಂದ 3
ಬೀಟ್ರೂಟ್ - 2
ಬೆಳ್ಳುಳ್ಳಿ - 5/6
ಶುಂಠಿ - 1/2 ಇಂಚು
ಹಸಿ ಮೆಣಸಿನ ಕಾಯಿ - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಬ್ರೆಡ್ ಪೌಡರ್ - 1 ಕಪ್
ರವಾ - 1/2 ಕಪ್
ಎಣ್ಣೆ - 2 ಚಮಚ
ಅರಿಶಿಣ - 1 ಚಿಟಿಕೆ
ಸಾಸಿವೆ - 1 ಚಮಚ
ಗರಂ ಮಸಾಲ - 1 ಚಮಚ
ಕಡಲೆ ಹಿಟ್ಟು - 1/4 ಕಪ್

ಮಾಡುವ ವಿಧಾನ :
ಬಟಾಣಿ ಮತ್ತು ಆಲೂಗಡ್ಡೆಯನ್ನು ಬೇರೆ ಬೇರೆಯಾಗಿ ಬೇಯಿಸಿಕೊಳ್ಳಬೇಕು.
ಕ್ಯಾರೆಟ್ ಮತ್ತು ಬೀಟ್ರೂಟ್ ನ್ನು ತುರಿದಿಟ್ಟುಕೊಳ್ಳಬೇಕು.
ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಳ್ಳಬೇಕು.
ರವಾವನ್ನು ಹುರಿದುಕೊಳ್ಳಬೇಕು.
ಒಂದು ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಸಾಸಿವೆ ಮತ್ತು ಅರಿಶಿಣ ಸೇರಿಸಿ ಕೈಯಾಡಿಸಬೇಕು.
ನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಬೇಕು.
ನಂತರ ತುರಿದ ಮತ್ತು ಬೇಯಿಸಿದ ತರಕಾರಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಬೇಕು.
ಕೊನೆಯಲ್ಲಿ ಗರಂ ಮಸಾಲ ಮತ್ತು ಬ್ರೆಡ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಬೇಕು.
ಕಡಲೆ ಹಿಟ್ಟಿಗೆ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ತೆಳುವಾದ ಮಿಶ್ರಣ ಮಾಡಬೇಕು.
ನಂತರ ಈ ಮಿಶ್ರಣಕ್ಕೆ ಬೇಕಾದ ಆಕಾರ ಕೊಟ್ಟು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ರವಾದಲ್ಲಿ ಹೊರಳಿಸಿ ಡೀಪ್ ಫ್ರೈ ಅಥವಾ ಶಾಲೋ ಫ್ರೈ ಮಾಡಿದರೆ ವೆಜ್ ಕಟ್ಲೆಟ್ ರೆಡಿ.

(ನಾನು ಮೈದಾನ ಬದಲು ಕಡಲೆ ಹಿಟ್ಟಿನ ಮಿಶ್ರಣ ಮಾಡಿದ್ದೇನೆ.)

ಕಟ್ಲೆಟ್ ಜೊತೆಗೆ ಕೆಂಪು ಚಟ್ನಿ ಮತ್ತು ಗ್ರೀನ್ ಚಟ್ನಿ

ವೇದಾವತಿ ಭಟ್ಟ
ಮುಂಬೈ

ಶುಕ್ರವಾರ, ಫೆಬ್ರವರಿ 10, 2023

ಮೆಂತ್ಯ ಹಿಟ್ಟು



ಬಹಳ ಆರೋಗ್ಯಕರವಾದ ಒಂದು ಸಾಂಪ್ರದಾಯಿಕವಾದ ರೆಸಿಪಿ. ಬಿಸಿ ಅನ್ನದ ಜೊತೆಗೆ ಉಪ್ಪು, ತುಪ್ಪ ಸೇರಿಸಿ ಊಟ ಮಾಡಿದರೆ ಅದ್ಭುತ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಡುಗೆ ಮಾಡಲು ಸಮಯವಿಲ್ಲ ಅಂದಾಗಲೂ ಸಹ ಇದು ಸಹಾಯಕ. ಮಕ್ಕಳಿಂದ ವಯಸ್ಸಾದವರವರೆಗೂ, ಬಾಣಂತಿಯರಿಗೂ ಇದು ಬಹಳ ಒಳ್ಳೆಯದು.

ಬೇಕಾಗುವ ಸಾಮಗ್ರಿ :
ಕಡಲೆ ಬೇಳೆ - 2 ಕಪ್
ಉದ್ದಿನ ಬೇಳೆ - 1 ಕಪ್ 
ಹೆಸರು ಬೇಳೆ - 3/4 ಚಮಚ
ರಾಗಿ - 2 ದೊಡ್ಡ ಚಮಚ
ಮೆಂತ್ಯ - 2 ದೊಡ್ಡ ಚಮಚ
ಜೀರಿಗೆ - 1 ಚಮಚ
ಕೊತ್ತಂಬರಿ - 1/2 ಚಮಚ
ಅರಿಶಿಣ - 1/4 ಚಮಚ
ಇಂಗು - 1/2 ಚಮಚ
ಒಣ ಮೆಣಸು - 4/5
ಉಪ್ಪು - 1/2 ಚಮಚ
ಮಾಡುವ ವಿಧಾನ :
ಉಪ್ಪು ಮತ್ತು ಇಂಗನ್ನು ಬಿಟ್ಟು ಉಳಿದೆಲ್ಲ ಪದಾರ್ಥವನ್ನು ಬೇರೆಬೇರೆಯಾಗಿ ಚೆನ್ನಾಗಿ ಹುರಿದುಕೊಳ್ಳಬೇಕು.
ತಣ್ಣಗಾದ ನಂತರ ಮಿಕ್ಸಿ ಜಾರ್ ಗೆ ನುಣ್ಣಗೆ ಪುಡಿ ಮಾಡಬೇಕು.
ಗಾಳಿಯಾಡದ ಡಬ್ಬದಲ್ಲಿ ಈ ಪುಡಿಯನ್ನು ಎರಡರಿಂದ ಮೂರು ತಿಂಗಳವರೆಗೂ ಕೆಡದಂತೆ ಇಡಬಹುದು.

ವೇದಾವತಿ ಭಟ್ಟ
ಮುಂಬೈ

ಗುರುವಾರ, ಫೆಬ್ರವರಿ 9, 2023

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಲಡ್ಡು


ಬೇಕಾಗುವ ಸಾಮಗ್ರಿ :
ಖರ್ಜೂರ - 1/2 kg
ಬಾದಾಮಿ - 50 g
ಗೋಡಂಬಿ - 50g
ಒಣ ದ್ರಾಕ್ಷಿ - 1 ಕಪ್
ಮೆಲನ್ ಸೀಡ್ - 100 g
ಗಸಗಸೆ - 2 ಚಮಚ
ಪಿಸ್ತಾ - 50 g

ಮಾಡುವ ವಿಧಾನ :
ಬಾದಾಮಿಯನ್ನು ಸ್ವಲ್ಪ ಹುರಿದು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
ಗೋಡಂಬಿ, ಪಿಸ್ತಾವನ್ನು ಸಹ ಚಿಚ್ಕದಾಗಿ ಕತ್ತರಿಸಿಕೊಳ್ಳಬೇಕು.
ಗಸಗಸೆಯನ್ನು ಹುರಿದು ಇಟ್ಟುಕೊಳ್ಳಬೇಕು.
ಮೆಲನ್ ಸೀಡ್ ನ್ನು ಸ್ವಲ್ಪ ಬೆಚ್ಚಗೆ ಮಾಡಿ ಇಟ್ಟುಕೊಳ್ಳಬೇಕು.
ಖರ್ಜೂರವನ್ನು ಬೀಜ ತೆಗೆದು ಮಿಕ್ಸಿ ಮಾಡಿ ದಪ್ಪ ತಳದ ಪಾತ್ರೆಗೆ ಹಾಕಬೇಕು.
ಒಲೆಯ ಮೇಲಿಟ್ಟು ಸರಿಯಾಗಿ ಪಾಕ ಬರುವವರೆಗೆ ಕೈಯಾಡಿಸಬೇಕು.
ನಂತರ ಬಾದಾಮಿ, ಗೋಡಂಬಿ, ಪಿಸ್ತಾ ಚೂರುಗಳನ್ನು ಸೇರಿಸಬೇಕು.
ಹುರಿದ ಮೆಲನ್ ಸೀಡ್, ಒಣ ದ್ರಾಕ್ಷಿ ಎಲ್ಲವನ್ನೂ ಸೇರಿಸಿ ಕೈಯಾಡಿಸಿ ಒಲೆಯಿಂದ ಕೆಳಗಿಳಿಸಬೇಕು.
ಮಿಶ್ರಣ ತಣ್ಣಗಾದ ನಂತರ ಉಂಡೆ ಮಾಡಬೇಕು.
ಹುರಿದ ಗಸಗಸೆಯ ಮೇಲೆ ಹೊರಳಾಡಿಸಿದರೆ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಲಡ್ಡು ರೆಡಿ.

(ವಾಲ್ ನಟ್ ಕೂಡ ಬಳಸಬಹುದು. ನಾನು ಬಳಸಿಲ್ಲ.)

ವೇದಾವತಿ ಭಟ್ಟ
ಮುಂಬೈ