ಶನಿವಾರ, ಜುಲೈ 20, 2019

ರಾಗಿ ಮಣ್ಣಿ

ಬೇಕಾಗುವ ಸಾಮಗ್ರಿ :
ರಾಗಿ - 1 ಕಪ್
ಬೆಲ್ಲ - 1 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಉಪ್ಪು - 1/4 ಚಮಚ
ತುಪ್ಪ - 2 ಚಮಚ

ಮಾಡುವ ವಿಧಾನ :
ರಾಗಿಯನ್ನು ನೀರಿನಲ್ಲಿ ರಾತ್ರಿಯೇ ನೆನೆಸಿಡಬೇಕು.
ಮರುದಿನ ಚೆನ್ನಾಗಿ ತೊಳೆದು ರುಬ್ಬಿ ಸೋಸಿ ಹಾಲನ್ನು ತೆಗೆದುಕೊಳ್ಳಬೇಕು.
ಇದಕ್ಕೆ ಉಪ್ಪು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಸುಮಾರು ಅರ್ಧಗಂಟೆಯ ನಂತರ ತಳಬಿಡಲು ಪ್ರಾರಂಭಿಸುತ್ತದೆ.
ಆಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಬೇಕಾದ ಆಕಾರದಲ್ಲಿ ಕಯ್ತರಿಸಬೇಕು.

ತುಪ್ಪ, ಹಾಲು, ಮೊಸರು ಯಾವುದರ ಜೊತೆಗಾದರೂ ಸವಿಯಬಹುದು.

ಗುರುವಾರ, ಜುಲೈ 4, 2019

ಪಾಲಕ ಸೊಪ್ಪಿನ ಬಜೆ

ಬೇಕಾಗುವ ಸಾಮಗ್ರಿ :
ಕಡಲೇ ಹಿಟ್ಟು - 1 ಕಪ್
ಜೀರಿಗೆ - ಚಮಚ
ಓಂಕಾಳು - 1/4 ಚಮಚ
ಪಾಲಕ ಸೊಪ್ಪು - 15 ಎಲೆ (ದೊಡ್ಡದು)
ಉಪ್ಪು - ರುಚಿಗೆ
ಕೊತ್ತಂಬರಿ ಸೊಪ್ಪು - 1 ಕಟ್ಟು
ಬೆಳ್ಳುಳ್ಳಿ - 8/10
ಹಸಿಮೆಣಸಿನ ಕಾಯಿ - 2/3

ಮಾಡುವ ವಿಧಾನ :
ಮೊದಲು ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಜೀರಿಗೆ, ಓಂಕಾಳು ಎಲ್ಲವನ್ನೂ ಮಿಕ್ಸಿ ಮಾಡಿಕೊಳ್ಳಬೇಕು.
ಒಂದು ಬೌಲ್ ಗೆ ಕಡಲೇ ಹಿಟ್ಟು, ಮಿಕ್ಸಿ ಮಾಡಿದ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿ ದೋಸೆಹಿಟ್ಟಿನ ಹದಕ್ಕಿಂದ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳುಬೇಕು.
ಪಾಲಕ ಸೊಪ್ಪನ್ನು ತೊಳೆದು ದಂಟಿನಿಂದ ಬೇರ್ಪಡಿಸಿಟ್ಟುಕೊಳ್ಳಬೇಕು.
ಕಲಸಿದ ಮಿಶ್ರಣದಲ್ಲಿ ಸೊಪ್ಪನ್ನು ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು.

ಗ್ರೀನ್ ಚಟ್ನಿ ಮತ್ತು ಸಾಸ್ ನ ಜೊತೆಗೆ ಸವಿಯಬಹುದು.

ಶಿರಾ

ಶಿರಸಿ, ಸಿದ್ದಾಪುರದ ಅತ್ಯಂತ ಜನಪ್ರಿಯವಾದ ತಿನಿಸು. ಮನೆಗೆ ಹೇಳದೇ ಯಾರಾದರೂ ಅತಿಥಿಗಳು ಬಂದಾಗ ದಿಢೀರ್ ಅಂತ ತಯಾರಿಸಬಹುದಾದ ತಿಂಡಿ ಶಿರಾ. ಕೇಸರಿಭಾತ್ ಎಂದೂ ಕೆಲವೆಡೆ ಹೇಳುತ್ತಾರೆ.

ಬೇಕಾಗುವ ಸಾಮಗ್ರಿ :
ರವಾ - 1 ಕಪ್
ಸಕ್ಕರೆ - 1 1/4 ಕಪ್
ಬಾಳೆಹಣ್ಣು - 2
ಏಲಕ್ಕಿ ಪುಡಿ - 1 ಚಿಟಿಕೆ
ನೀರು - 3 ರಿಂದ 4 ಕಪ್
ತುಪ್ಪ - 3/4 ಕಪ್
ಒಣದ್ರಾಕ್ಷಿ - ಸ್ವಲ್ಪ
ಉಪ್ಪು - ರುಚಿಗೆ

ಮಾಡುವ ವಿಧಾನ :
ನೀರನ್ನು ಕುದಿಯಲು ಇಡಬೇಕು.
ಬಾಳೆಹಣ್ಣನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಬೇಕು.
ರವಾಕ್ಕೆ ತುಪ್ಪವನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು.
ನಂತರ ಬಿಸಿ ನೀರನ್ನು ಸೇರಿಸಿ ಕೈಯಾಡಿಸಬೇಕು.
ಹೆಚ್ಚದ ಬಾಳೆಹಣ್ಣು, ಒಣದ್ರಾಕ್ಷಿ, ಉಪ್ಪು,  ಸೇರಿಸಿ ಬೇಯಿಸಬೇಕು.
ನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ತಳ ಬಿಡುವವರೆಗೆ ಕೈಯಾಡಿಸದರೆ ಶಿರಾ ಸಿದ್ಧವಾಯಿತು.

ಬಾಳೆಹಣ್ಣಿನ ಬನ್ಸ್

ಬೇಕಾಗುವ ಸಾಮಗ್ರಿ :
ಬಾಳೆಹಣ್ಣು - 3 (ಚೆನ್ನಾಗಿ ಕಳಿತದ್ದು)
ಸಕ್ಕರೆ - 5/6 ಚಮಚ
ಅಡಿಗೆ ಸೋಡಾ - 1 ಚಿಟಿಕೆ
ಗೋಧಿ ಹಿಟ್ಟು - ಅಗತ್ಯವಿದ್ದಷ್ಟು
ಮೊಸರು - 1 ಸೌಟು
ಉಪ್ಪು - 1/4 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ :
ಮೊದಲು ಬಾಳೆಹಣ್ಣನ್ನು ಸುಲಿದು ಮಿಕ್ಸಿ ಮಾಡಿಕೊಳ್ಳಬೇಕು.
ನಂತರ ಇದಕ್ಕೆ ಸಕ್ಕರೆ, ಅಡಿಗೆ ಸೋಡಾ, ಮೊಸರು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು.
ನಂತರ ಇದಕ್ಕೆ ಅಗತ್ಯವಿದ್ದಷ್ಚು ಗೋಧಿ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ನಂತರ ಅತ್ರಾಸದಂತೆ ತಟ್ಟಿ  ಕಾದ ಎಣ್ಣೆಯಲ್ಲಿ ಕರಿಯಬೇಕು.

ಚಟ್ನಿ ಮತ್ತು ಸಾಂಬಾರ್ ಜೊತೆಗೆ ಸವಿದರೇ ರುಚಿ ಹೆಚ್ಚು.

ಬೆಣ್ಣೆ ಬಿಸ್ಕತ್

ದಿಢೀರ್ ಅಂತ ಮಾಡಬಹುದಾದ ತಿಂಡಿ. ಚಹಾದ ಜೊತೆಗಂತೂ ಬಹಳ ಒಳ್ಳೆಯ ಕಾಂಬಿನೇಷನ್. ಬಹಳ ಕಡಿಮೆ ಸಾಮಗ್ರಿಗಳನ್ನು ಬಳಸಿ ಸ್ವಲ್ಪವೇ ಸಮಯದಲ್ಲಿ ಮಾಡಬಹುದು.

ಬೇಕಾಗುವ ಸಾಮಗ್ರಿ :
ಕಾಯಿತುರಿ - ಪೂರ್ತಿ ಒಂದು ಕಾಯಿಯದ್ದು
ಸಕ್ಕರೆ - 1 ಕಪ್ ( ಸ್ವಲ್ಪ ಜಾಸ್ತಿ ಬಳಸಬಹುದು)
ಉಪ್ಪು - 1/2 ಚಮಚ
ಗೋಧಿ ಹಿಟ್ಟು - ಕಾಯಿತುರಿ ಮಿಶ್ರಣಕ್ಕೆ ಅಗತ್ಯವಿದ್ದಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ :
ಕಾಯಿತುರಿಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಅರ್ಧ ಗಂಟೆಯ ಕಾಲ ಹಾಗೆಯೇ ಇಡಬೇಕು. ಸಕ್ಕರೆ ಪೂರ್ತಿಯಾಗಿ ಕರಗಿ ಇದು ನೀರೊಡೆಯುತ್ತದೆ.
ಇದಕ್ಕೆ ಅಗತ್ಯವಿದ್ದಷ್ಟು ಗೋಧಿ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಿಕೊಂಡು ಕಲಸಿಕೊಳ್ಳುಬೇಕು.
ಕಲಸಿದ ಹಿಟ್ಟನ್ನು ಅರ್ಧ ಗಂಟೆ ಹಾಗೆಯೇ ಬಿಡಬೇಕು.
ಚೆನ್ನಾಗಿ ನಾದಿ ಸಣ್ಣ ಉಂಡೆ ಮಾಡಿ ಬಾಳೆ ಇಲ್ಲವೇ ಪ್ಲಾಸ್ಟಿಕ್ ಹಾಳೆಯ ಮೇಲೆ ಅತ್ರಾಸದಂತೆ ತಟ್ಟಿ ಎಣ್ಣೆಯಲ್ಲಿ ಕಲಿಯಬೇಕು.