ಬುಧವಾರ, ಸೆಪ್ಟೆಂಬರ್ 21, 2022

ಕೊಬ್ಬರಿ_ಬಿಸ್ಕತ್




ಬೇಕಾಗುವ ಸಾಮಗ್ರಿ :
ಕಾಯಿ ತುರಿ - 1 ಕಾಯಿಯದ್ದು (3 ಕಪ್ ಸಿಗುತ್ತದೆ)
ಸಕ್ಕರೆ - 1 ರಿಂದ ಒಂದು ಕಾಲು ಕಪ್
ಗೋಧಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು
ಉಪ್ಪು - 1/2 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ :
ಮೊದಲಿಗೆ ಕಾಯಿತುರಿಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ ಒಂದು ಗಂಟೆಗಳ ಕಾಲ ಬಿಡಬೇಕು.
ಆಗ ಸಕ್ಕರೆ ಕರಗಿ ನೀರೊಡೆದಿರುತ್ತದೆ.
ಇದಕ್ಕೆ ಅಗತ್ಯಕ್ಕೆ ತಕ್ಕಂತೆ ಗೋಧಿ ಹಿಟ್ಟು ಸೇರಿಸಿ ಚಪಾತಿಗಿಂತ ಸ್ವಲ್ಪ ತೆಳುವಾಗಿ ಕಲಸಿ ಅರ್ಧ ಗಂಟೆಗಳ ಕಾಲ ಬಿಡಬೇಕು.
ನಂತರ ಅತ್ರಾಸ (ಕಜ್ಜಾಯ) ದಂತೆ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕೆಂಪಗಾಗುವವರೆಗೆ ಕರಿಯಬೇಕು.
ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕು.

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ